", "articleSection": "Crime,News", "image": { "@type": "ImageObject", "url": "https://prod.cdn.publicnext.com/s3fs-public/463655-1751174012-manjunath---2025-06-29T104327.544.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ನಗರದ ಕೊಡಿಯಾಲ‌್‌ಬೈಲಿನಲ್ಲಿರುವ ಯು.ಕೆ. ರೀಗಲ್ ಅಕಾಡೆಮಿ ಎಂಬ ಸಂಸ್ಥೆ ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಎಫ್‌ಬಿಯಲ್ಲಿ ಜಾ...Read more" } ", "keywords": ""Visa fraud Mangaluru, cybercrime police, foreign employment scam, financial fraud case, Karnataka police investigation" ", "url": "https://dashboard.publicnext.com/node" } ಮಂಗಳೂರು: ವಿದೇಶದಲ್ಲಿ ವೀಸಾ ಕೂಡಿಸುದಾಗಿ 16 ಲಕ್ಷ ವಂಚನೆ! ಪ್ರಕರಣ ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದೇಶದಲ್ಲಿ ವೀಸಾ ಕೂಡಿಸುದಾಗಿ 16 ಲಕ್ಷ ವಂಚನೆ! ಪ್ರಕರಣ ದಾಖಲು

ಮಂಗಳೂರು: ನಗರದ ಕೊಡಿಯಾಲ‌್‌ಬೈಲಿನಲ್ಲಿರುವ ಯು.ಕೆ. ರೀಗಲ್ ಅಕಾಡೆಮಿ ಎಂಬ ಸಂಸ್ಥೆ ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಎಫ್‌ಬಿಯಲ್ಲಿ ಜಾಹೀರಾತು ಪ್ರಕಟಿಸಿತ್ತು. ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ತನ್ನ ಪುತ್ರನಿಗೆ ಯು.ಕೆ.ಯಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದರು. ಈ ವೇಳೆ ಸಂಸ್ಥೆಯು 16 ಲಕ್ಷ ರೂ.ನೀಡಿದರೆ 90 ದಿನಗಳಲ್ಲಿ ವೀಸಾ ಕೊಡಿಸುವುದಾಗಿ ಭರವಸೆ ನೀಡಿತ್ತು.

ಅದರಂತೆ ಯು.ಕೆ. ರೀಗಲ್ ಅಕಾಡೆಮಿ ಸಂಸ್ಥೆಯ ಕಚೇರಿಯಲ್ಲಿ ಸೂರಜ್ ಜೋಸೆಫ್ ಎಂಬಾತ 2 ಲಕ್ಷ ರೂ. ನಗದು ಮುಂಗಡ ಪಡೆದು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾನೆ. ಬಳಿಕ 16 ಲಕ್ಷ ರೂ. ನೀಡುವಂತೆ ಪದೇ ಪದೆ ಒತ್ತಾಯಿಸಿದ್ದಲ್ಲದೆ ಕೊಡದಿದ್ದರೆ ವೀಸಾ ರದ್ದಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದ. ಆದ್ದರಿಂದ 2023ರ ಅ.27ರಂದು 3 ಲಕ್ಷ ರೂ. ಮತ್ತು ಡಿ.1ರಂದು 13 ಲಕ್ಷ ರೂ. ಹಣ ಸಂಸ್ಥೆಯ ಖಾತೆಗೆ ಜಮಾ ಮಾಡಲಾಗಿತ್ತು. ಆ ಬಳಿಕ ಸೂರಜ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ದೂರಲಾಗಿದೆ.

2024ರ ಮಾ.20ರಂದು ಕಚೇರಿಗೆ ಹೋದಾಗ ಸೂರಜ್ ಜೋಸೆಫ್ ಅಲ್ಲಿದ್ದು, 3 ತಿಂಗಳೊಳಗೆ ವೀಸಾ ಕಳುಹಿಸುತ್ತೇನೆ. ಇಲ್ಲವಾದಲ್ಲಿ ಆರು ತಿಂಗಳೊಳಗೆ ಹಣ ವಾಪಸ್ ನೀಡುವುದಾಗಿ ಬರೆದು ಕೊಟ್ಟಿದ್ದ. ಆರು ತಿಂಗಳು ಕಳೆದರೂ ವೀಸಾವನ್ನೂ ನೀಡದೆ, ಹಣವನ್ನು ವಾಪಸ್ ಕೊಡದೆ ಮತ್ತೆ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

2024ರ ಅ. 3ರಂದು ಅದೇ ಕಚೇರಿಗೆ ಹೋದಾಗ 16 ಲಕ್ಷ ರೂ. ಚೆಕ್ ನೀಡಿದ್ದು, ಡಿ.16ರಂದು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ಆದ್ದರಿಂದ ಹಣ ಪಡೆದು ವೀಸಾ ನೀಡದೆ ವಂಚಿಸಿರುವ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

29/06/2025 10:43 am

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ