", "articleSection": "Crime,Law and Order,News", "image": { "@type": "ImageObject", "url": "https://prod.cdn.publicnext.com/s3fs-public/43124920250629055155filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾರವಾರ: ಕೆಆರ್ಎಸ್ ಪಕ್ಷದ ಮುಖಂಡ ವಿನಾಯಕ ನಾಯ್ಕ ಹಾಗೂ ಪಕ್ಷದ ಮುಖಂಡರು ಇಲ್ಲಿನ ತಹಸೀಲ್ದಾರ ಕಚೇರಿಗೆ ಅನುಮತಿ ಇಲ್ಲದೇ ನುಗ್ಗಿ ಅಧಿಕಾರಿಗಳ ...Read more" } ", "keywords": "Node", "url": "https://dashboard.publicnext.com/node" }
ಕಾರವಾರ: ಕೆಆರ್ಎಸ್ ಪಕ್ಷದ ಮುಖಂಡ ವಿನಾಯಕ ನಾಯ್ಕ ಹಾಗೂ ಪಕ್ಷದ ಮುಖಂಡರು ಇಲ್ಲಿನ ತಹಸೀಲ್ದಾರ ಕಚೇರಿಗೆ ಅನುಮತಿ ಇಲ್ಲದೇ ನುಗ್ಗಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನಾಯಕ ನಾಯ್ಕ, ರಾಜೇಶ ಕಾಶಿನಾಥ ನಾಯ್ಕ, ನೀಲಕಂಠ ಎ.ಎನ್ ಹಾಗೂ ಕೆಆರ್ಎಸ್ ಪಕ್ಷದ ಮುಖಂಡರು ಜೂ.27 ರಂದು ತಹಸೀಲ್ದಾರ ಕಚೇರಿಗೆ ಆಗಮಿಸಿದ್ದರು. ಕಚೇರಿಯ ಆವರಣದ ಮುಂದೆ ಲಂಚಮುಕ್ತ ಕರ್ನಾಟಕ ಅಭಿಯಾನ ಪ್ರಾರಂಭ ಮಾಡಿದ್ದೇವೆ ಎಂದು ಒಳ ನುಗ್ಗಿದ್ದಾರೆ. ಎಲ್ಲಾ ವಿಭಾಗದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಗೆ ಭಯ ಉಂಟುಮಾಡಿದ್ದು, ಅಧಿಕಾರಿಗಳನ್ನು ಸುತ್ತುವರೆದು ಇಲ್ಲಸಲ್ಲದ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಲೈವ್ ವಿಡಿಯೋ ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಮತ್ತು ಮಹಿಳಾ ಸಿಬ್ಬಂದಿಯ ಜತೆಗೆ ಅನುಚಿತವಾಗಿ ವರ್ತಿಸಿದ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಪ್ರತಾಪ ಶಾಂತಾರಮ ರಾಣೆ ದೂರು ನೀಡಿದ್ದಾರೆ.
Kshetra Samachara
29/06/2025 05:51 pm