", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/43595620250629062520filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮುಲ್ಕಿ:ಸಂಘ ಸಂಸ್ಥೆಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ಬಡವರ್ಗಕ್ಕೆ ಸಹಕಾರ ,ಸಹಾಯ ಹಸ್ತ ನೀಡುವ ಕಾರ್ಯ ಮಾಡಬೇಕು ಎಂದು...Read more" } ", "keywords": "Node", "url": "https://dashboard.publicnext.com/node" }
ಮುಲ್ಕಿ:ಸಂಘ ಸಂಸ್ಥೆಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ಬಡವರ್ಗಕ್ಕೆ ಸಹಕಾರ ,ಸಹಾಯ ಹಸ್ತ ನೀಡುವ ಕಾರ್ಯ ಮಾಡಬೇಕು ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು. ಕಿನ್ನಿಗೋಳಿ ಸಮೀಪದ ಪುನರೂರು ಬಳಿಯ ಬಾಬಕೋಡಿ ಶ್ರೀ ಅದಿಶಕ್ತಿ ನಾಗಕನ್ನಿಕಾ ದೇವಸ್ಥಾನದಲ್ಲಿ ಕಿನ್ನಿಗೋಳಿ ಜೆ. ಬಿ. ಫ್ರೆಂಡ್ಸ್ ಮತ್ತು ಗ್ರಾಮದ ದಾನಿಗಳ ಸಹಕಾರದಲ್ಲಿ ನಡೆದ ಪುನರೂರು ಭಾರತಮಾತ ಶಾಲೆ, ಪದ್ಮನೂರು , ಉಲ್ಲಂಜೆ ಶಾಲಾ ಮಕ್ಕಳಿಗೆ ಉಚಿತ ಛತ್ರಿ ವಿತರಣೆ ಹಾಗೂ ಚಿಕಿತ್ಸಾ ವೆಚ್ಚಕ್ಕೆ ಅರ್ಥಿಕ ಸಹಾಯ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಗುತ್ತಕಾಡು ಹಾಗೂ ಅಂಬುಲೆನ್ಸ್ ಚಾಲಕ ಅಲ್ವಿನ್ ಸುವರಿಸ್ ರನ್ನು ಸಮಾಜ ಸೇವೆಗೆ ಗೌರವಿಸಲಾಯಿತು. ಸುಮಾರು ನಾಲ್ಕು ಮಂದಿಗೆ ವೈದ್ಯಕೀಯ ಚಿಕತ್ಸೆಗೆ ಶಿಕ್ಷಣಕ್ಕೆ ಅರ್ಥಿಕ ಸಹಾಯ ನೀಡಲಾಯಿತು.. ಉದ್ಯಮಿ ಪೃಥ್ವಿರಾಜ ಆಚಾರ್ಯ, ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ವಸಂತಿ ಶೇಶಪ್ಪ ಮಡಿವಾಳ , ಶೇಷಪ್ಪ ಮಡಿವಾಳ, ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪುನರೂರು ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/06/2025 06:27 pm