", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250629080241filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಪ್ಪಿನಂಗಡಿ:ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಬುಧವಾರ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ನಾಪತ್ತೆಯಾಗಿದ್ದ ಲಾರಿ ...Read more" } ", "keywords": "Node", "url": "https://dashboard.publicnext.com/node" } ಉಪ್ಪಿನಂಗಡಿ:ಲಾರಿ ಅಪಘಾತ-ನಾಪತ್ತೆಯಾಗಿದ್ದ ಚಾಲಕನ ಶವ ಪತ್ತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ:ಲಾರಿ ಅಪಘಾತ-ನಾಪತ್ತೆಯಾಗಿದ್ದ ಚಾಲಕನ ಶವ ಪತ್ತೆ

ಉಪ್ಪಿನಂಗಡಿ:ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಬುಧವಾರ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಪ್ರೇಮ್ ಕುಮಾರ್ (38) ಎಂಬವರ ಮೃತ ದೇಹವು ಕೊಡ್ಯಕಲ್ಲು ಹಳ್ಳದಲ್ಲಿ ಪತ್ತೆಯಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯುತ್ ಟ್ರಾನ್ಸ್ ಫಾರ್ಮ‌್ರಗಳನ್ನು | ಸಾಗಿಸುತ್ತಿದ್ದ ಲಾರಿಯು ದಾರಿ ಮಧ್ಯೆ

ಕೊಡಕಲ್ಲು ಎಂಬಲ್ಲಿ ಹೆದ್ದಾರಿ ಬದಿ ಮಗುಚಿ ಬಿದ್ದಿತ್ತು. ಅಪಘಾತದ ಬಳಿಕ ಲಾರಿ ಚಾಲಕ ತನ್ನ ಮನೆಯವರಿಗೆ ಮತ್ತು ಮಾಲಕರಿಗೆ ಪೋನಾಯಿಸಿ ಅಪಘಾತವಾಗಿರುವ ಮಾಹಿತಿ ತಿಳಿಸಿ ಬಳಿಕ ಚಾಲಕ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿದ್ದರು.

ಗುರುವಾರ ಕೊಡ್ಕಕಲ್ಲು ಪರಿಸರದ ಹಳ್ಳವೊಂದರಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದ್ದು, ಲಾರಿ ಚಾಲಕನ ಮನೆ ಮಂದಿ ಪ್ರೇಮ್ ಕುಮಾರ್‌ನ ಮೃತದೇಹವೆಂದು ಖಚಿತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮ ನಿವಾಸಿಯಾಗಿರುವ ಅಂಬಿ ಕಾಪತಿ ಎಂಬವರ ಮಗನಾದ ಪ್ರೇಮ್ ಕುಮಾ‌ರ್ ಅಪಘಾತದಿಂದ ಸಣ್ಣ ಪುಟ್ಟ ಗಾಯ ಗೊಂಡಿದ್ದರು.

ಈ ಮಧ್ಯೆ ಮೃತದೇಹ ದೊರೆತ ಹಳ್ಳದ ಸ್ಥಳಕ್ಕೆ ಅವರು ಯಾಕಾಗಿ ಹೋಗಿದ್ದಾರೆನ್ನುವುದು ಸಂಶಯ ಹುಟ್ಟು ಹಾಕಿದೆ.ಅಪಘಾತವಾದ ಸ್ಥಳಕ್ಕೂ ಶವ ದೊರೆತ ಸ್ಥಳಕ್ಕೂ ಸುಮಾರು 200 ಮೀಟರ್ ಅಂತರ ವಿದ್ದು, ಯಾವುದೇ ಸುಲಲಿತ ಸಂಚಾರ ದಾರಿ ಇಲ್ಲ. ಅಪಘಾತದಿಂದ ಸಂಭವಿಸಿದೆ ಎನ್ನಲಾದ ಹಣೆಯಲ್ಲಿನ ಗಾಯ ಮತ್ತು ಮೂಗಿನಲ್ಲಿ ರಸ್ತೆ ಸುರಿಯುತ್ತಿದ್ದ ಲಕ್ಷಣಗಳು ಮಾತ್ರ ಮೇಲ್ನೋಟಕ್ಕೆ ಕಾಣಿಸಿದ್ದು, ಶನಿವಾರ ಮಂಗಳೂರಿನಲ್ಲಿ ಶವದ ಮರಣೋತ್ತರ

ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Edited By : PublicNext Desk
Kshetra Samachara

Kshetra Samachara

29/06/2025 08:02 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ