", "articleSection": "Politics,Cultural Activity", "image": { "@type": "ImageObject", "url": "https://prod.cdn.publicnext.com/s3fs-public/229640-1751268248-yoga.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾ...Read more" } ", "keywords": "Yoga Ratna Awards Bengaluru, Santosh Lad Foundation, Swasthayoga organization, yoga awards ceremony, Bengaluru yoga event, yoga for wellness, Santosh Lad, yoga recognition awards. ", "url": "https://dashboard.publicnext.com/node" } ಬೆಂಗಳೂರು : ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಅದ್ದೂರಿಯಾಗಿ ನಡೆದ ಯೋಗ ರತ್ನ ಪ್ರಶಸ್ತಿ ಸಮಾರಂಭ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಅದ್ದೂರಿಯಾಗಿ ನಡೆದ ಯೋಗ ರತ್ನ ಪ್ರಶಸ್ತಿ ಸಮಾರಂಭ

ಬೆಂಗಳೂರು : ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆದಿದೆ.

ವಿಶ್ವ ಮಟ್ಟದಲ್ಲಿ ಯೋಗದಲ್ಲಿ ಸಾಧನೆ ಮಾಡಿದ ಉಕ್ರೇನ್‌ ಮೂಲದ ಸತಿ ಮಾತಾ, ಉತ್ತರ ಪ್ರದೇಶದ ಡಾ. ಯೋಗ ಋಷಿ ವಿಶ್ವಕೇತು, ಗೋವಾದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಆಚಾರ್ಯ ಸ್ವಾಮೀಜಿ, ಲಡಾಕ್‌ನ ಪೂಜ್ಯ ಬಿಕ್ಕು ಸಂಗಸೇನ ಅವರಿಗೆ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಂತೋಷ್‌ ಲಾಡ್‌ ಫೌಂಡೇಶನ್‌ ಮುಖ್ಯಸ್ಥರಾದ ಸಚಿವ ಸಂತೋಷ್‌ ಲಾಡ್‌, ಶ್ವಾಸ ಯೋಗ ಸಂಸ್ಥೆಯೊಂದಿಗೆ ಎರಡನೇ ಬಾರಿ ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದೇವೆ. ಕಳೆದ ಬಾರಿ ಬಳ್ಳಾರಿಯಲ್ಲಿ ಆಯೋಜಿಸಲಾಗಿತ್ತು. ಯೋಗದಲ್ಲಿ ಅಪೂರ್ವವಾದ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ಅತ್ಯಂತ ಸಂತಸದ ವಿಷಯ. ಇಂತಹ ಹಲವಾರು ಕಾರ್ಯಗಳನ್ನು ನಮ್ಮ ಫೌಂಡೇಶನ್‌ ಮಾಡ್ತಾ ಬರುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಶ್ವಾಸಯೋಗ ಪೀಠದ ಯೋಗ ಗುರು ವಚನಾನಂದ ಸ್ವಾಮೀಜಿ, ಸುತ್ತೂರು ಮಠ, ಸಿದ್ದಗಂಗಾ, ನಿಡಸೋಶಿ, ಪೇಜಾಮಠದ ಸ್ವಾಮೀಜಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಲ್‌ ಸಂತೋಷ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

30/06/2025 12:54 pm

Cinque Terre

11.17 K

Cinque Terre

1

ಸಂಬಂಧಿತ ಸುದ್ದಿ