", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/39640520250630023953filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ವಿಷ ಹಾಕಿ 5 ಹುಲಿಗಳನ್ನು ಕೊಂದಿದ್ದಾರೆ ಎಂಬ ಆರೋಪ ಹೊತ್ತಿ...Read more" } ", "keywords": "Chamarajanagar Tiger Killing Case: accused handed over to forest department", "url": "https://dashboard.publicnext.com/node" } ಚಾಮರಾಜನಗರ : ಹುಲಿ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆ ಕಸ್ಟಡಿಗೆ ನೀಡಿದ ಕೋರ್ಟ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಹುಲಿ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆ ಕಸ್ಟಡಿಗೆ ನೀಡಿದ ಕೋರ್ಟ್

ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ವಿಷ ಹಾಕಿ 5 ಹುಲಿಗಳನ್ನು ಕೊಂದಿದ್ದಾರೆ ಎಂಬ ಆರೋಪ ಹೊತ್ತಿರುವ ಮೂವರು ಆರೋಪಿಗಳು ಸೋಮವಾರ ಹನೂರಿನ ನ್ಯಾಯಾಲಯಕ್ಕೆ ಹಾಜರಾದರು.

ಹನೂರು ತಾಲೂಕಿನ ಕೊಪ್ಪ ಗ್ರಾಮದ ಕುನ್ನಪ್ಪ, ಮಾದುರಾಜು ಹಾಗೂ ನಾಗರಾಜು ಅವರ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯಗೊಳ್ಳುವ ಹಿನ್ನೆಲೆ ಹನೂರಿನ ಕೋರ್ಟ್​ಗೆ ಹಾಜರಾದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಾವ್ಯಶ್ರೀ ಅವರು, ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದ್ದನ್ನು ಪುರಸ್ಕರಿಸಿ ಜು.3 ರ ಮಧ್ಯಾಹ್ನ 2ರ ತನಕ ಅರಣ್ಯ ಇಲಾಖೆ ಕಸ್ಟಡಿಗೆ ನೀಡಿ ಆದೇಶಿಸಿದರು.

ವಿಚಾರಣೆ ವೇಳೆ ಸರಿಯಾಗಿ ಆಹಾರ ಕೊಡಬೇಕು, ಯಾವುದೇ ರೀತಿಯಾಗಿ ಹಲ್ಲೆ ನಡೆಸಬಾರದು ಎಂದು ಸೂಚಿಸಿದರು. ಆರೋಪಿಗಳ ಪರ ವಕೀಲ ಮಹಾದೇವಪ್ರಸಾದ್ ಎಂಬವರು ವಕಾಲತ್ತು ವಹಿಸಿದ್ದರು.

Edited By : PublicNext Desk
PublicNext

PublicNext

30/06/2025 02:39 pm

Cinque Terre

5.52 K

Cinque Terre

0

ಸಂಬಂಧಿತ ಸುದ್ದಿ