ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸುವಿನ ಮೃತ ದೇಹಕ್ಕೆ ವಿಷ ಸಿಂಪಡಿಸಿ ಹುಲಿಗಳು ಕೊಂದ ಮೂವರ ಬಂಧನ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಸೇರಿ ಒಟ್ಟು ೫ ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿದ್ದಾರೆ.

ಹಸುವಿನ ಮಾಲೀಕ ಹನೂರು ತಾಲೂಕಿನ ಕೊಪ್ಪ ಗ್ರಾಮದ ಕೋನಪ್ಪ, ಹಸುವಿನ ಕಳೇಬರಕ್ಕೆ ವಿಷಪ್ರಾಶನ ಮಾಡಿರುವ ಆರೋಪದಡಿ ಮಾದರಾಜು ಬಿನ್ ಶಿವಣ್ಣ ಹಾಗೂ ಕಳಗೋಪಿದೊಡ್ಡಿಯ ನಾಗರಾಜ ಬಿನ್ ಪೂಜಾರಿಗೌಡ ಎಂಬುವವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ತನಿಖೆ ನಡೆಯುತ್ತಿದ್ದು, ಬಂಧಿತ ಮೂವರು ಆರೋಪಿತರನ್ನು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಡು ಪ್ರಾಣಿಯ ದಾಳಿಯಿಂದ ಕೋನಪ್ಪ ಅವರ ಹಸು ಸಾವನ್ನಪ್ಪಿತ್ತು. ಇದರಿಂದ ಕೋಪಗೊಂಡ ಕೋನಪ್ಪ, ಮಾದರಾಜು, ನಾಗರಾಜು ಅವರು ಹಸುವಿನ ಮೃತದೇಹದ ಮೇಲೆ ವಿಷ ಸಿಂಪಡಣೆ ಮಾಡಿದ್ದಾರೆ. ಇದನ್ನು ತಿಂದು ಹುಲಿಗಳು ಸಾವನ್ನಪ್ಪಿದೆ ಎಂದು ಆರೋಪಿಸಲಾಗುತ್ತಿದೆ.

Edited By :
Kshetra Samachara

Kshetra Samachara

28/06/2025 10:56 pm

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ