", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1751282543-ella.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ನಾಳೆ ಬೆಳಿಗ್ಗೆ 11 ಗಂಟೆಗೆ ರಣದೀಪ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡುತ್ತೇನೆ. ಆ ವೇಳೆ ಅವರು ಏನು ಕೇಳುತ್ತಾರೆ ಅದಕ್ಕೆಲ್ಲಾ ...Read more" } ", "keywords": "Belagavi, Raju Kage, Surjewala meeting, Karnataka politics, MLA Raju Kage. ", "url": "https://dashboard.publicnext.com/node" } ಬೆಳಗಾವಿ : ನಾಳೆ ಬೆಳಿಗ್ಗೆ ಸುರ್ಜೇವಾಲಾ ಅವರನ್ನು ಭೇಟಿ ಆಗುವೆ - ಶಾಸಕ ರಾಜು ಕಾಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ನಾಳೆ ಬೆಳಿಗ್ಗೆ ಸುರ್ಜೇವಾಲಾ ಅವರನ್ನು ಭೇಟಿ ಆಗುವೆ - ಶಾಸಕ ರಾಜು ಕಾಗೆ

ಬೆಳಗಾವಿ : ನಾಳೆ ಬೆಳಿಗ್ಗೆ 11 ಗಂಟೆಗೆ ರಣದೀಪ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡುತ್ತೇನೆ. ಆ ವೇಳೆ ಅವರು ಏನು ಕೇಳುತ್ತಾರೆ ಅದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರೆದ ಸಭೆ ಕುರಿತು ನನಗೆ ನಿನ್ನೆ ತಡರಾತ್ರಿ ಮಾಹಿತಿ ಬಂತು. ಅಲ್ಲದೇ ಇಂದು ಸಾರಿಗೆ ಇಲಾಖೆ ಸಭೆ ಮೊದಲೇ ನಿಗದಿ ಆಗಿತ್ತು. ಹಾಗಾಗಿ, ಇಂದು ರಾತ್ರಿ ಬೆಂಗಳೂರಿಗೆ ಹೋಗಿ, ನಾಳೆ ಬೆಳಿಗ್ಗೆ ಅವರನ್ನು ಭೇಟಿ ಆಗಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಯಾವ ವಿಚಾರಕ್ಕೆ ಸುರ್ಜೇವಾಲಾ ತಮ್ಮನ್ಮು ಕರೆದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲಾ ಮೊನ್ನೆ ಹೇಳಿದ್ದೇನೆ ಎಂದು ಹೇಳಿ ಅಲ್ಲಿಂದ ರಾಜು ಕಾಗೆ ಹೊರಟು ಹೋದರು.

Edited By : Vinayak Patil
PublicNext

PublicNext

30/06/2025 04:52 pm

Cinque Terre

7.77 K

Cinque Terre

0

ಸಂಬಂಧಿತ ಸುದ್ದಿ