", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/286525-1751282219-WhatsApp-Image-2025-06-30-at-4.46.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಗಾಂಧಿ ಮೈದಾನದ ಬಳಿ ಪ್ರತೀ ಬಾರಿ ಮಳೆಗೆ ಹೆದ್ದಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ...Read more" } ", "keywords": "Mulki, Karnad State Highway, flooding issues, traffic hazards, heavy rainfall, Coastal Karnataka, road safety concerns. ", "url": "https://dashboard.publicnext.com/node" }
ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಗಾಂಧಿ ಮೈದಾನದ ಬಳಿ ಪ್ರತೀ ಬಾರಿ ಮಳೆಗೆ ಹೆದ್ದಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೆರೆಯಂತಾಗುತ್ತಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಮುಲ್ಕಿಯಿಂದ ಕಾರ್ನಾಡ್ ಮೂಲಕ ರಾಜ್ಯ ಹೆದ್ದಾರಿ ಮೂಡಬಿದ್ರೆ ಹಾಗೂ ಕಟೀಲು ಕಡೆಗೆ ಹಾದು ಹೋಗುತ್ತಿದ್ದು ನಗರ ಪಂಚಾಯತ್ ವ್ಯಾಪ್ತಿಯ ಚರಂತಿಪೇಟೆ, ಕಾರ್ನಾಡ್, ಗೇರುಕಟ್ಟೆ ಬಳಿ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆ ಹೊಂಡಮಯವಾಗಿ ಪರಿಣಮಿಸಿದೆ.
ಕಾರ್ನಾಡ್ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸಾವಿರಾರು ಜನರು ತಹಶೀಲ್ದಾರ್ , ನಗರ ಪಂಚಾಯತ್, ಮೆಸ್ಕಾಂ ಕಚೇರಿಗೆ ಓಡಾಡುತ್ತಿದ್ದು, ಹೊಂಡಮಯ ರಸ್ತೆಯಿಂದ ಜನರು ಸಂಬಂಧಪಟ್ಟ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಲು ಲೋಕೋಪಯೋಗಿ ಇಲಾಖೆ ಉದಾಸೀನತೆಯ ಪ್ರವೃತ್ತಿ ತೋರಿಸುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ರಾಜ್ಯ ಹೆದ್ದಾರಿ ರಸ್ತೆ ಇನ್ನಷ್ಟು ಹಾನಿಗೀಡಾಗುವುದನ್ನು ತಪ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಶುಕುಮಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
PublicNext
30/06/2025 04:59 pm