ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: SIT‌ಗೆ ಮತ್ತಷ್ಟು ಬಲ, 20 ಪೊಲೀಸ್ ಅಧಿಕಾರಿಗಳ ನೇಮಕ"

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂಳಲಾಗಿದೆ ಎಂದು ಹೇಳಲಾದ ವ್ಯಕ್ತಿಯೊಬ್ಬರ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಹೆಚ್ಚುವರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶಿಸಿದ್ದಾರೆ.

ರಾಜ್ಯ ಸರಕಾರವು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾ‌ರ್ ದಯಾಮ ಸದಸ್ಯರಾಗಿದ್ದರು.

ಇದೀಗ ಎಸ್‌ಐಟಿಗೆ ಹೆಚ್ಚುವರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ವಿವರ ಹೀಗಿದೆ.

ಸಿ.ಎ.ಸೈಮನ್ - ಎಸ್‌ಪಿ, ಡಿಸಿಆರ್‌ಇ ಮಂಗಳೂರು,

ಲೋಕೇಶ್ ಎ.ಸಿ - ಡಿಎಸ್‌ಪಿ, ಸೆನ್ ಪಿಎಸ್, ಉಡುಪಿ

ಮಂಜುನಾಥ್‌- ಡಿಎಸ್‌ಪಿ, ಸಿಎನ್‌ಪಿಎಸ್‌, ದ.ಕ.

ಮಂಜುನಾಥ್‌- ಪಿಐ, ಸಿಎಸ್‌ಪಿ,

ಸಂಪತ್‌ ಇ.ಸಿ.- ಪಿಐ, ಸಿಎಸ್‌ಪಿ,

ಕುಸುಮಾಧರ್ ಕೆ.- ಪಿಐ, ಸಿಎಸ್‌ಪಿ,

ಮಂಜುನಾಥ್ ಗೌಡ- ಪಿಐ ಶಿರಸಿ ಗ್ರಾಮಾಂತರ, ಉತ್ತರ ಕನ್ನಡ,

ಸವಿತೃತೇಜ ಪಿ.ಡಿ.- ಸಿಪಿಐ, ಬೈಂದೂರು,

ಉಡುಪಿ, ಕೋಕಿಲಾ ನಾಯಕ್- ಪಿಎಸ್‌ಐ ಸಿಎಸ್‌ಪಿ,

ವಯ್ಲೆಟ್ ಫೆಮಿನಾ- ಪಿಎಸ್ಟ್‌, ಸಿಎಸ್‌ಪಿ,

ಶಿವಶಂಕ‌ರ್- ಪಿಎಸ್ಐ ಸಿಎಸ್‌ಪಿ,

ರಾಜ್ ಕುಮಾರ್ ಉಕ್ಕಲಿ- ಪಿಎಸ್ಐ ಶಿರಸಿ ಎನ್ಎಂ ಪಿಎಸ್ ಉತ್ತರ ಕನ್ನಡ,

ಸುಹಾಸ್ ಆರ್.- ಪಿಎಸ್ಐ, ತನಿಖೆ, ಅಂಕೋಲಾ ಪಿಎಸ್ ಉತ್ತರ ಕನ್ನಡ,

ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್ಐ, ತನಿಖೆ, ಮುಂಡಗೋಡ ಪಿಎಸ್ಐ, ಉತ್ತರ ಕನ್ನಡ,

ಗುಣಪಾಲ್ ಜೆ. - ಪಿಎಸ್ಐ ಮೆಸ್ಕಾಂ, ಮಂಗಳೂರು,

ಸುಭಾಷ್ ಕಾಮತ್- ಎಎಸ್ಐ, ಉಡುಪಿ ಟೌನ್ ಪಿಎಸ್,

ಹರೀಶ್ ಬಾಬು- ಸಿಹೆಚ್ ಸಿ 91, ಕಾಪು ಪಿಎಸ್ ಉಡುಪಿ,

ಪ್ರಕಾಶ್-ಸಿಹೆಚ್ ಸಿ 1140, ಮಲ್ಪೆ ವೃತ್ತ ಕಚೇರಿ, ಉಡುಪಿ,

ನಾಗರಾಜ್ - ಸಿಹೆಚ್ ಸಿ 1177, ಕುಂದಾಪುರ ಟೌನ್ ಪಿಎಸ್

Edited By :
PublicNext

PublicNext

23/07/2025 01:28 pm

Cinque Terre

119.86 K

Cinque Terre

5

ಸಂಬಂಧಿತ ಸುದ್ದಿ