", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474799-1756826239-17-08-2025.01_35_41_21.Still237.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ಬದಲಾವಣೆ ವಿವಾದದ ನಡುವೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ “ಕಾಲು ಕೆದರಿ ಜಗಳ ಮಾಡಿದ್ರ...Read more" } ", "keywords": ""Davanagere, Minister Mallikarjun controversy, MLA statement backlash, public reaction" ", "url": "https://dashboard.publicnext.com/node" } ದಾವಣಗೆರೆ: “ಕಾಲು ಕೆದರಿ ಜಗಳ ಮಾಡಿದ್ರೆ ಒಳಗೆ ಹಾಕಿಸ್ತೀನಿ” - ಸಚಿವ ಮಲ್ಲಿಕಾರ್ಜುನ ಹೇಳಿಕೆ ವಿರುದ್ಧ ತೀವ್ರ ಪ್ರತಿಕ್ರಿಯೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: “ಕಾಲು ಕೆದರಿ ಜಗಳ ಮಾಡಿದ್ರೆ ಒಳಗೆ ಹಾಕಿಸ್ತೀನಿ” - ಸಚಿವ ಮಲ್ಲಿಕಾರ್ಜುನ ಹೇಳಿಕೆ ವಿರುದ್ಧ ತೀವ್ರ ಪ್ರತಿಕ್ರಿಯೆ!

ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ಬದಲಾವಣೆ ವಿವಾದದ ನಡುವೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ “ಕಾಲು ಕೆದರಿ ಜಗಳ ಮಾಡಿದ್ರೆ ಒಳಗೆ ಹಾಕಿಸ್ತೀನಿ” ಎಂಬ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆಗೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹಿಂದೂಗಳಿಗೆ ಬೆದರಿಕೆ ಹಾಕುವ ರೀತಿ ಸಚಿವರು ಮಾತನಾಡಿದ್ದಾರೆ. ಒದ್ದು ಒಳಗೆ ಹಾಕಿಸುತ್ತೇನೆ ಅಂತೆ! ಇವರ ಕೈಯಲ್ಲಿ ಕೋಲು ಇದೆಯಾ? ಪೊಲೀಸರು ಇವರ ಮಾತು ಕೇಳ್ತಾರಾ?” ಎಂದು ಪ್ರಶ್ನಿಸಿದರು.

ಅಷ್ಟೇ ಅಲ್ಲದೇ, “ಹಿಂದೂಗಳು ಏನಾದರೂ ಮಾಡಿದರೆ ರಾಜಕೀಯ, ಅಲ್ಪಸಂಖ್ಯಾತರ ವಿಷಯದಲ್ಲಿ ಏನಾದರೂ ಮಾತನಾಡಿದ್ರೆ ರಾಜಕಾರಣ ಅಲ್ಲವಾ? ಒದ್ದು ಒಳಗೆ ಹಾಕಿಸ್ತೀನಿ ಅಂದ್ರೆ ಇದು ಬಾಂಗ್ಲಾನಾ? ಪಾಕಿಸ್ತಾನಾ? ತಾಲಿಬಾನಾ?” ಎಂದು ಸಚಿವರ ಹೇಳಿಕೆಗೆ ಶಾಸಕ ಬಿ.ಪಿ. ಹರೀಶ್ ತೀವ್ರ ವಿರೋಧ ವ್ಯಕ್ತಪಡಿಸಿದರು.

“ಈದ್ ಮಿಲಾದ್ ಮೆರವಣಿಗೆ ಹಿಂದೂ ಪ್ರದೇಶಗಳಲ್ಲಿ ಹೋಗೋದಿಲ್ಲವಾ? ಅದಕ್ಕೆ ಕಡಿವಾಣ ಹಾಕ್ತಿರಾ? ಹಿಂದೆಯೂ ರೈಲಿಗೆ ಕಲ್ಲು ಎಸೆಯರಿ ಎಂದವರು ಕಾರ್ಪೋರೇಟರ್‌ಗೆ ಬೆಂಬಲ, ಆದರೆ ಈಗ ಐತಿಹಾಸಿಕ ಹಿನ್ನೆಲೆಯ ಪ್ಲೆಕ್ಸ್ ಹಾಕಿದವರಿಗೆ ಕೋಮುಪ್ರಚೋದನೆ ಅಂತೆ ಎಂದು ಮಲ್ಲಿಕಾರ್ಜುನ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.

Edited By :
Kshetra Samachara

Kshetra Samachara

02/09/2025 08:47 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ