ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು, ಕುಖ್ಯಾತ ಅಂತರ ರಾಜ್ಯ ಮನೆ ಕಳ್ಳಿಯರನ್ನು ಬಂಧಿಸಿದ್ದಾರೆ, ಕೃಷ್ಣಗಿರಿ ಗ್ರಾಮದ ಬಾಲಾಜಿ ಹಾಗೂ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಮುಳಬಾಗಿಲು ತಾಲೂಕಿನ ಕೃಷ್ಣಗಿರಿ ಮೂಲದ ಅಕ್ಷಯ ಹಾಗೂ ಶೋಭ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತರಿಂದ 35 ಗ್ರಾಂ ಚಿನ್ನ ಹಾಗೂ ಎರಡೂಕಾಲು ಲಕ್ಷ ನಗದು ವಶಕ್ಕೆ ಪಡೆದಿದ್ದು, ಇಬ್ಬರು ಕಳ್ಳಿಯರು ಮುಳಬಾಗಿಲು ಸೇರಿ, ಪಕ್ಕದ ರಾಜ್ಯಗಳಲ್ಲೂ ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
30/01/2026 08:37 am
LOADING...