ಜಮಖಂಡಿ : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದ ಪರಿಣಾಮ ಭಾರತಕ್ಕೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾದ ಬೆನ್ನಲ್ಲೇ ಜಿಲ್ಲೆಯಲ್ಲೂ ಗೃಹ ಬಳಕೆ ಸಿಲಿಂಡರ್ ಬುಕಿಂಗ್ ಆಗದೆ ಜನರು ಪರದಾಡುವಂತಾಗಿದೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಹೆಚ್ಚಿನ ಜನರು ಸಿಲಿಂಡರ್ ಬುಕಿಂಗ್ ಆಗದೆ ಗುರುವಾರ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಆಗಿಲ್ಲ. ಹಿಂದೆ ಬುಕ್ ಮಾಡಿದವರಿಗೆ ಮಾತ್ರ ಪೂರೈಕೆ ಆಗಿದೆ. ಇರುವಷ್ಟು ದಿನ ಮಾತ್ರ ಸಿಲಿಂಡರ್ ಪೂರೈಸಲಾಗುವುದು ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ ಈಚೆಗೆ ಸಿಲಿಂಡರ್ ದರ ಕೂಡ ಹೆಚ್ಚಳ ಮಾಡಿದೆ. ಈಗ ದಿಢೀರನೇ ಸರಬರಾಜು ಮಾಡುವುದನ್ನೇ ನಿಲ್ಲಿಸಿರುವುದರಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಬಾರದು ಎಂದು ನಗರದ ಕೆಲ ಜನರು ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದರು.
PublicNext
12/03/2026 09:15 pm
LOADING...