ರಾಯಚೂರು: ಬಹಿರ್ದೆಸೆಗೆ ಹೋಗಲೆಂದು ಕಾಲುವೆಗೆ ತೆರಳಿದ್ದ ಬಾಲಕ ನೀರು ಪಾಲಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸಗೂರು ತಾಲೂಕಿನ ಜಾವೂರ ಗ್ರಾಮದಲ್ಲಿ ಘಟನೆ ನಡೆದಿದ್ದು 9 ವರ್ಷದ ದಶರಥ ಹಡಪದ ಎಂಬಾತನೇ ಕಾಲುವೆ ನೀರು ಪಾಲಾದ ಬಾಲಕ ಎಂದು ಗುರುತು ಪತ್ತೆಯಾಗಿದೆ.
ಇಂದು ಬೆಳಿಗ್ಗೆ ಮಧ್ಯಾಹ್ನ ಕಾಲುವೆ ಬಳಿ ತೆರಳಿದ್ದ ದಶರಥ ಹಡಪದ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಬಾಲಕನ ಹುಡುಕಾಟಕ್ಕೆ ಸ್ಥಳೀಯರಿಂದ ಹರಸಾಹಸ ನಡೆದಿದ್ದು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಶೋಧಕಾರ್ಯ ಆರಂಭಿಸಿದ್ದಾರೆ. ಘಟನೆ ಕುರಿತಂತೆ ಲಿಂಗಸಗೂರು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/03/2026 08:22 am
LOADING...