ಶಿವಮೊಗ್ಗ: ಬನ್ನೇರುಘಟ್ಟದಲ್ಲಿರುವ ಆನೆ ಮರಿಗೆ ಡಾ.ಸಮೀಕ್ಷಾ ರೆಡ್ಡಿ ಹೆಸರಿಡುತ್ತೇವೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಹಾಡ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,
ಘಟನೆಯಲ್ಲಿ ಯಾರ ತಪ್ಪು ಇದೆ ಎಂದು ತನಿಖೆಯಿಂದ ಹೊರ ಬರುತ್ತದೆ. ಇಲ್ಲಿ ಅಧಿಕಾರಿಗಳ ಸಮನ್ವಯದ ಕೊರತೆಯ ಕುರಿತು ಸರಿ ಪಡಿಸಲಾಗುತ್ತದೆ. ಜೀವ ಕಳೆದುಕೊಂಡ ಸಮೀಕ್ಷಾ ರೆಡ್ಡಿಯವರ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಬೇಕಿದೆ. ಬನ್ನೇರುಘಟ್ಟದಲ್ಲಿ ಇರುವ ಆನೆ ಮರಿಗೆ ಡಾ.ಸಮೀಕ್ಷಾ ರೆಡ್ಡಿಯವರ ಹೆಸರು ಘೋಷಿಸಲಾಗುತ್ತದೆ.
ಒಂದು ವೇಳೆ ಹಂಸ ನೀರು ಕುದುರೆಗೆ ಹೆಣ್ಣು ಮರಿ ಜನನವಾದರೆ ಸಮೀಕ್ಷಾ ಎಂದು ಹೆಸರಿಡಲಾಗುವುದು ಎಂದರು.
PublicNext
21/03/2026 09:32 pm
LOADING...