ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊನ್ನಂಪೇಟೆ ಜನತೆಗೆ ಶಾಸಕ ಪೊನ್ನಣ್ಣರಿಂದ 28 ಲಕ್ಷ ರೂ. ವೈಯಕ್ತಿಕ ವೆಚ್ಚದಲ್ಲಿ ನೀರಿನ ಭಾಗ್ಯ!

ಪೊನ್ನಂಪೇಟೆ: ಈ ಬಾರಿಯ ಬೇಸಿಗೆಯಲ್ಲಿ ಸಾರ್ವಜನಿಕರು ನೀರಿನ ಅಭಾವದಿಂದ ತೊಂದರೆ ಅನುಭವಿಸಬಾರದು ಎಂಬ ಮಹತ್ವಾಕಾಂಕ್ಷೆಯಿಂದ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ತಮ್ಮ ವೈಯಕ್ತಿಕ ಕೊಡುಗೆಯಾದ ₹ 28 ಲಕ್ಷ ವೆಚ್ಚದಲ್ಲಿ, ಪೊನ್ನಂಪೇಟೆ ಭಾಗದ ಅಗತ್ಯವಿರುವ ಸಾರ್ವಜನಿಕರಿಗೆ ತುರ್ತು ನೀರಿನ ಸೌಲಭ್ಯ ಒದಗಿಸಲು ಟ್ಯಾಂಕರ್ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ.

ಶಾಸಕರಿಂದ ಉದ್ಘಾಟನೆ ಮತ್ತು ಸಂದೇಶ

ಪೊನ್ನಂಪೇಟೆಯಲ್ಲಿ ಈ ಟ್ಯಾಂಕರ್ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, "ತೀವ್ರ ಬೇಸಿಗೆಯಿಂದಾಗಿ ನೀರಿನ ಅಭಾವ ತಲೆದೋರಿದೆ. ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದು ತಿಳಿಸಿದರು. ಈ ಉಪಕ್ರಮದಿಂದಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶದ ಜನರಿಗೆ ದೊಡ್ಡ ನೆಮ್ಮದಿ ಸಿಗುವ ನಿರೀಕ್ಷೆಯಿದೆ.

Edited By : PublicNext Desk
Kshetra Samachara

Kshetra Samachara

30/03/2026 07:23 am

Cinque Terre

180

Cinque Terre

0

ಸಂಬಂಧಿತ ಸುದ್ದಿ