ಶಿವಮೊಗ್ಗ: ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಶಾಲಾ ಬಾಲಕ ಸಂಕೇತ್ನ ಸಮಾಧಿಯನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದು ಘಟನೆಯನ್ನ ನೆನೆದು ಸಂಕೇತ್ ತಾಯಿ ಮಂಜುಳ ಬೇಸರ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಸಂಕೇತ್ ತಾಯಿ ಮಂಜುಳ, ಬದುಕಿದ್ದಾಗಲೂ ನನ್ನ ಮಗನಿಗೆ ನೆಮ್ಮದಿ ಸಿಗಲಿಲ್ಲ. ಈಗ ಅವನ ಸಮಾಧಿಯನ್ನ ಕಿಡಿಕೇಡಿಗಳು ಧ್ವಂಸ ಮಾಡಿದ್ದಾರೆ. ನೆನೆಸಿಕೊಂಡ್ರೆ ಬೇಸರ ಆಗ್ತಿದೆ. ನಾವು ಪೊಲೀಸರನ್ನ ನಂಬಿದ್ದೇವೆ. ಅವರು ನಮಗೆ ನ್ಯಾಯ ಕೊಡಿಸಬೇಕು ಎಂದರು. ಇನ್ನು ಈ ತರ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂಕೇತ್ ತಾಯಿ ಒತ್ತಾಯಿಸಿದ್ದಾರೆ.
PublicNext
02/04/2026 11:26 am
LOADING...