ಹೈದರಾಬಾದ್: ತೆಲಂಗಾಣದ ರಾಯಕೊಡೆಯಲ್ಲಿ ಆರ್ಟಿಸಿ ಬಸ್ನಲ್ಲಿ ನಡೆದ ಘಟನೆಯೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಇಲ್ಲದ ಪ್ರಯಾಣಿಕನಿಗೆ ಅತಿಯಾದ ದಂಡ ವಿಧಿಸಲು ಯತ್ನಿಸಿದ್ದಕ್ಕೆ ಟಿಕೆಟ್ ಇನ್ಸ್ಪೆಕ್ಟರ್ಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ರಾಯಕೊಡೆಯಲ್ಲಿ ನಡೆದಿದೆ. ಈ ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹೈದರಾಬಾದ್ನಿಂದ ನಾರಾಯಣಖೇಡ್ಗೆ ತೆರಳುತ್ತಿದ್ದ ಆರ್ಟಿಸಿ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ರಾಯಕೊಡೆಯಲ್ಲಿ ಟಿಕೆಟ್ ತಪಾಸಣಾ ತಂಡ ಬಸ್ ಅನ್ನು ನಿಲ್ಲಿಸಿ ಪರಿಶೀಲನೆ ನಡೆಸಿದೆ. ಈ ವೇಳೆ, ಒಬ್ಬ ಪ್ರಯಾಣಿಕನ ಬಳಿ ಟಿಕೆಟ್ ಇರಲಿಲ್ಲ. ಟಿಕೆಟ್ ಇನ್ಸ್ಪೆಕ್ಟರ್ ಆತನಿಗೆ ದಂಡ ವಿಧಿಸುವುದಾಗಿ ಹೇಳಿ, ಸಾಮಾನ್ಯವಾಗಿ ವಿಧಿಸುವ 500 ರೂಪಾಯಿ ದಂಡದ ಬದಲು 2,000 ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ಸ್ಪೆಕ್ಟರ್ನ ಈ ಅತಿಯಾದ ಬೇಡಿಕೆಯಿಂದ ಕೆರಳಿದ ಪ್ರಯಾಣಿಕ, ಆಕ್ರೋಶದಿಂದ ಟಿಕೆಟ್ ಇನ್ಸ್ಪೆಕ್ಟರ್ಗೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದ್ದಾನೆ. ಅಚ್ಚರಿ ಎಂಬಂತೆ, ಬಸ್ ಕಂಡಕ್ಟರ್ ಕೂಡ ಪ್ರಯಾಣಿಕನೊಂದಿಗೆ ಸೇರಿಕೊಂಡು ಇನ್ಸ್ಪೆಕ್ಟರ್ಗೆ ಹಲ್ಲೆ ಮಾಡಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
01/05/2026 10:24 pm
LOADING...