ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಿನಲ್ಲಿ ಮುಳುಗಿ ಯುವಕ ಸಾವು

ಸಿದ್ದಾಪುರ : ದನಕರುಗಳ ಮೈ ತೊಳೆಯಲು ಡ್ಯಾಮ್ ಗೆ ಹೋದ ವೇಳೆಯಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಸಮೀಪದ ಹುಸೂರ್ ಡ್ಯಾಮ್ ನಲ್ಲಿ ನಡೆದಿದೆ.ರವಿಕಿರಣ ಸುರೇಶ ನಾಯ್ಕ್ ಅಂಬಳಿಕೆ (24 )ಮೃತ ಯುವಕ. ಈತನು ಶುಕ್ರವಾರ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ತಾವು ಸಾಕಿದ ದನಕರುಗಳ ಮೈ ತೊಳೆಯಲು ಹುಸೂರ್ ಡ್ಯಾಮ್ ಗೆ ಹೋದಾಗ ದನದ ಕುತ್ತಿಗೆಯಲ್ಲಿದ್ದ ಹಗ್ಗ ಈತನ ಕಾಲಿಗೆ ಸಿಲುಕಿ ದನವು ನೀರಿನಲ್ಲಿ ಹೋದಾಗ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

01/05/2026 11:28 pm

Cinque Terre

4.38 K

Cinque Terre

0

ಸಂಬಂಧಿತ ಸುದ್ದಿ