ಬೆಂಗಳೂರು: ನಗರದಲ್ಲಿ ಮಹಾ ಮಳೆಗೆ ನೆಲಕಚ್ಚಿದ ಮರಗಳ ತೆರವು ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ನಗರದಲ್ಲಿ 400ಕ್ಕೂ ಅಧಿಕ ಮರಗಳು ಸಾವಿರಕ್ಕೂ ಅಧಿಕ ರೆಂಬೆಕೊಂಬೆಗಳು ಧರಾಶಾಹಿ ಆಗಿದ್ದು, ಈ ಪೈಕಿ ಇನ್ನೂ ಕೂಡ ನಗರದಲ್ಲಿ 136 ಮರಗಳ ತೆರವು ಆಗಬೇಕಿದೆ. ಅಲ್ಲದೆ, 200ಕ್ಕೂ ಅಧಿಕ ರೆಂಬೆಕೊಂಬೆಗಳು ಕ್ಲೀಯರ್ ಆಗಬೇಕಿದೆ. ಘಟನೆ ನಡೆದು ದಿನ ಇಷ್ಟಾದರೂ ನಗರದ ಕೆಲವು ರಸ್ತೆಗಳಲ್ಲಿ ಬಿದ್ದ ಮರಗಳ ಅವಶೇಷಗಳು ಹಾಗೆ ಬಿಡಲಾಗಿದ್ದು, ಜಿಬಿಎ ವಿರುದ್ಧ ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.
Kshetra Samachara
04/05/2026 10:36 pm
LOADING...