ಚಳ್ಳಕೆರೆ ನಗರದ ಹೃದಯಭಾಗದ ಪೊಲೀಸ್ ಠಾಣೆ ತಾಲ್ಲೂಕು ಕಚೇರಿ ಮುಂಭಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದ ಗಾಂಧಿಭವನ ಖಾಲಿ ನಿವೇಶನದಲ್ಲಿ ಕಸ ತ್ಯಾಜ್ಯ ,ಪ್ಲಾಸ್ಟಿಕ್ ಪೇಪರ್ ಪ್ಲಾಸ್ಟಿಕ್ ಲೋಟ, ಕಬ್ಬಿನ ಜಲ್ಲೆ ಸೇರಿದಂತೆ ಬೀರ್ ಬಾಟಲಿಗಳು ಮದ್ಯದ ಪೌಚುಗಳು ಸೇರಿದಂತೆ ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದು ಗಾಂಧಿ ಭವನ ಖಾಲಿ ನಿವೇಶನ ಈಗ ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ.
ಸುತ್ತಮುತ್ತಲಿನ ಇರುವ ಅಂಗಡಿ ,ಹೋಟೆಲ್, ಹಾಗೂ ಕಬ್ಬಿನ ಜ್ಯೂಸ್ ಮಾರಾಟ ಮಾಡುವವರು ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದು. ಇದೇ ಜಾಗದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹೋಗುವುದರಿಂದ ಈ ಸ್ಥಳಕ್ಕೆ ಬಂದರೆ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹೃದಯ ಭಾಗದಲ್ಲಿರುವಂತಹ ಈ ಗಾಂಧಿ ಭವನದ ಖಾಲಿ ನಿವೇಶನದಲ್ಲಿ ಕಸದ ತ್ಯಾಜ್ಯವನ್ನು ತಂದು ಹಾಕುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.
PublicNext
20/05/2026 06:48 pm
LOADING...