ಮೈಸೂರು: ಮೈಸೂರು ಜಿಲ್ಲೆಯಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಸಿಡಿಲು ಬಡಿತದ ಘಟನೆಗಳಲ್ಲಿ ಓರ್ವ ಆದಿವಾಸಿ ವ್ಯಕ್ತಿ ಮೃತಪಟ್ಟಿದ್ದು, ಹಸು ಕೂಡ ಬಲಿಯಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿ ಗ್ರಾಮದ ನಿವಾಸಿ ಅಪ್ಪಯ್ಯ ಸಿಡಿಲಿಗೆ ಬಲಿಯಾದ ಆದಿವಾಸಿ. ಇಂದು ಮಧ್ಯಾಹ್ನ ಮೇಕೆ ಮೇಯಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ.
ಮಳೆಯಿಂದ ರಕ್ಷಿಸಿಕೊಳ್ಳಲು ಅಪ್ಪಯ್ಯ ಅವರು ಸಮೀಪದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ದುರದೃಷ್ಟವಶಾತ್ ನೇರವಾಗಿ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಯುತ್ತಿದ್ದ ಹಸು ಸಾವು
ಮೈಸೂರು ಜಿಲ್ಲೆಯ ಮತ್ತೊಂದು ಭಾಗದಲ್ಲಿ ಸಿಡಿಲು ಬಡಿದು ಮೇಯುತ್ತಿದ್ದ ಹಸುವೊಂದು ಸ್ಥಳದಲ್ಲೇ ಜೀವ ಕಳೆದುಕೊಂಡಿದೆ.
Kshetra Samachara
28/05/2026 08:15 pm
LOADING...