ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ಮಾಣಕಾಪುರ ನಿವಾಸಿ, ಪದವೀಧರ ಯುವಕ ಪ್ರಶಾಂತ ತಾಯಗೊಂಡ ಗಾಯಕ್ವಾಡ (೩೮) ಎಂಬಾತ ಹಂಚಿನಾಳ (ಕೆ.ಎಸ್.) ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ. ಮೃತ ಪ್ರಶಾಂತ ಗಾಯಕ್ವಾಡ ಅವರು ಮೂಲತಃ ಹಂಚಿನಾಳ ಗ್ರಾಮದವರಾಗಿದ್ದು,ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಮಾಣಕಾಪುರದಲ್ಲಿರುವ ಸೋದರಮಾವನ ಮನೆಯಲ್ಲಿ ವಾಸಿಸುತ್ತಿದ್ದರು.
ಡಿ.ಎಡ್ (ಪದವಿ) ಶಿಕ್ಷಣ ಮುಗಿಸಿದ್ದ ಅವರು, ಎಂಪಿಎಸ್ಸಿ (MPSC) ಪರೀಕ್ಷೆಯನ್ನೂ ಬರೆದಿದ್ದರು. ಪ್ರಸ್ತುತ ಇಚಲಕರಂಜಿಯ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಶಾಂತ ತಮ್ಮ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮೂಲ ಗ್ರಾಮವಾದ ಹಂಚಿನಾಳಕ್ಕೆ ತಮ್ಮ ಚಿಕ್ಕಪ್ಪನ ಮನೆಗೆ ಬಂದಿದ್ದರು. ಈ ನಡುವೆ, ಅವರು ತಮ್ಮ ಚಿಕ್ಕಪ್ಪ ಬಾಳಾಸಾಹೇಬ ಗಾಯಕ್ವಾಡ ಅವರ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ನಿಪ್ಪಾಣಿ ಗ್ರಾಮೀಣ ಉಪನಿರೀಕ್ಷಕ (PSI) ಶಿವರಾಜ್ ನಾಯಕವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ಪ್ರಶಾಂತ ಅವರ ಸಹೋದರ ಪ್ರವೀಣ್ ಗಾಯಕ್ವಾಡ ಪೊಲೀಸರಿಗೆ ದೂರು ನೀಡಿದ್ದಾರೆ.
Kshetra Samachara
02/06/2026 11:46 am
LOADING...