ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆದ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರು ಸಿಎಂ ಆಗುವಂತೇ ಆಶೀರ್ವಾದ ಮಾಡಿದ್ದರು. ಅಂದು ಮಾಡಿದ್ದ ಆಶೀರ್ವಾದ ಇಂದು ಫಲ ನೀಡಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರು, ಜೈನ ಧರ್ಮಕ್ಕೆ ನಿಗಮ ಮಂಡಳಿ ಸ್ಥಾಪನೆ ಹಾಗೂ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಉಪಸ್ಥಿತರಿದ್ದ ಆಚಾರ್ಯರ ನೇತೃತ್ವದಲ್ಲಿ ಆಶೀರ್ವಾದ ಮಾಡಿದ್ದು, ಈಗ ಆಶೀರ್ವಾದ ಫಲಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2026 07:27 pm
LOADING...