ಬಾಗಲಕೋಟೆ : ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ದೇಸಾಯಿ ವೃತ್ತದ ಬಳಿ ನಡೆದಿದೆ. ರವಿವಾರವಾಗಿದ್ದರಿಂದ ವಾಹನದಲ್ಲಿ ಯಾವುದೇ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿರಲಿಲ್ಲ.
ಹೀಗಾಗಿ ಕೇವಲ ಚಾಲಕ ಮಾತ್ರ ಬಸ್ ನಲ್ಲಿದ್ದು ಚಾಲಕ ಗಾಯಗೊಂಡಿದ್ದಾನೆ. ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಖಾಸಗಿ ಶಾಲೆ ಎಂದು ತಿಳಿದುಬಂದಿದ್ದು, ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
08/06/2026 08:41 am
LOADING...