ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಬಡತನ ಮೆಟ್ಟಿ ನಿಂತ ವೈದ್ಯ: ಹಿರೇಕೋಡಿ ಗ್ರಾಮಕ್ಕೆ ಸುಶಾಂತ ಹೆಮ್ಮೆ

ಚಿಕ್ಕೋಡಿ: ಹಠ ಹಾಗೂ ಸ್ಪಷ್ಟ ಗುರಿಯೊಂದಿದ್ದರೆ ಎಂಥದೇ ಬಡತನವಿದ್ದರೂ ಸಾಧನೆಯ ಶಿಖರ ಏರಬಹುದು ಎಂಬುದನ್ನು ಹಿರೇಕೋಡಿ ಗ್ರಾಮದ ಕೃಷಿ ಕುಟುಂಬದ ಯುವಕನೊಬ್ಬ ಸಾಧಿಸಿ ತೋರಿಸಿದ್ದಾನೆ. ಸ್ಥಳೀಯ ಗ್ರಾಮದ ಪ್ರತಿಭೆ ಸುಶಾಂತ ಶೇಖರ ಬಾಳಿಕಾಯಿ ಅವರು MBBS ಪದವಿ ಪೂರೈಸುವ ಮೂಲಕ ಹಿರೇಕೋಡಿ ಗ್ರಾಮದ ಇತಿಹಾಸದಲ್ಲೇ ಮೊದಲ MBBS ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತ್ಯಂತ ಸಾಮಾನ್ಯ ಹಾಗೂ ಬಡತನದ ಹಿನ್ನೆಲೆಯಿಂದ ಬಂದ ಡಾ. ಸುಶಾಂತ ಅವರು ಆರಂಭದಿಂದಲೂ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದರು. ವೈದ್ಯರಾಗಿ ಸಮಾಜ ಸೇವೆ ಮಾಡಬೇಕೆಂಬ ಸ್ಪಷ್ಟ ಗುರಿಯನ್ನು ಹೊಂದಿದ್ದ ಅವರು, ಎದುರಾದ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿ ನಿಂತು ಇಂದು ಈ ಉನ್ನತ ಸಾಧನೆ ಮಾಡಿದ್ದಾರೆ. ಇವರ ಈ ಅಪೂರ್ವ ಸಾಧನೆಯು ಇಡೀ ಹಿರೇಕೋಡಿ ಊರಿಗೆ ಹಾಗೂ ಅವರ ಮನೆತನಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಬಡತನದಲ್ಲಿಯೇ ಜನಿಸಿದರೂ, ಧೃತಿಗೆಡದೆ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಡಾ. ಸುಶಾಂತ ಅವರು ತಮ್ಮ ಸಾಧನೆಯ ಮೂಲಕ ಇಂದಿನ ಯುವ ಪೀಳಿಗೆಗೆ ತೋರಿಸಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಪ್ರಥಮ ವೈದ್ಯರಾಗಿ ಹೊರಹೊಮ್ಮಿದ ಡಾ. ಸುಶಾಂತ ಶೇಖರ ಬಾಳಿಕಾಯಿ ಅವರಿಗೆ ಊರಿನ ಸಮಸ್ತ ಜನತೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಮುಂದಿನ ವೈದ್ಯಕೀಯ ಜೀವನವು ಮತ್ತಷ್ಟು ಯಶಸ್ಸು, ಕೀರ್ತಿ ಹಾಗೂ ಜನಸೇವೆಯಿಂದ ಕೂಡಿರಲಿ ಎಂದು ನಾಡಿನ ಗಣ್ಯರು ಮತ್ತು ಮಿತ್ರರು ಶುಭ ಹಾರೈಸಿದ್ದಾರೆ.

Edited By : PublicNext Desk
PublicNext

PublicNext

13/06/2026 10:29 am

Cinque Terre

4.53 K

Cinque Terre

0

ಸಂಬಂಧಿತ ಸುದ್ದಿ