ಹಾವೇರಿ: ಫಲವತ್ತಾದ ಭೂಮಿಯಲ್ಲಿ ಟೌನ್ಶಿಪ್ ಮಾಡಲು ಬಿಡೋದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕ ಎನ್.ರವಿಕುಮಾರ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಧಿಸೂಚನೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.
ಸಿಎಂ ಡಿ.ಕೆ. ಶಿವಕುಮಾರ್ ಹಿತಾಸಕ್ತಿ ಇದರಲ್ಲಿ ದೊಡ್ಡಮಟ್ಟದಲ್ಲಿದೆ ಎಂದು ರವಿಕುಮಾರ್ ಆರೋಪಿಸಿದರು. ಇದರ ವಿರುದ್ದ ಹೋರಾಟವನ್ನು ಶುರು ಮಾಡುತ್ತೇವೆ. ಫಲವತ್ತಾದ ಭೂಮಿಯನ್ನು ಟೌನ್ ಶಿಪ್ ಗೆ ತೆಗೆದುಕೊಳ್ಳಬೇಡಿ. ಇದು ನಮ್ಮ ಕ್ಲೀಯರ್ ಸ್ಟ್ಯಾಂಡ್ ಎಂದು ರವಿಕುಮಾರ್ ತಿಳಿಸಿದರು.
PublicNext
13/06/2026 09:11 pm
LOADING...