ಸಿದ್ದಾಪುರ : ವಿದ್ಯುತ್ ಖಾಸಗೀಕರಣ ಗೊಳಿಸುವುದಲ್ಲ ವಿರೋಧಿಸಿ ಸಿದ್ಧಾಪುರದಲ್ಲಿ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಚಂದ್ರಗುತ್ತಿ ಸರ್ಕಲ್ ನಿಂದ ವಿದ್ಯುತ್ ಖಾಸಗೀಕರಣ ಗೊಳಿಸಲು ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತೇವೆ ನಾವು ಅವಕಾಶ ನೀಡುವುದಿಲ್ಲ ಎನ್ನುವ ಹಲವಾರು ಘೋಷಣೆ ಕೂಗುತ್ತಾ ಹೊಸ ಬಸ್ ನಿಲ್ದಾಣ ಮೂಲಕ ರಾಜ್ಯಮಾರ್ಗದಲ್ಲಿ ತೆರಳಿ ತಹಶೀಲ್ದಾರ್ ಕಚೇರಿ ಆವರಣ ತಲುಪಿದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬೃಹತ್ ಸಭೆ ನಡೆಸಿ ವಿವಿಧ ಸಂಘಟನೆಗಳ ಮುಖ್ಯಸ್ಥರು ತಮ್ಮ ವಿರೋಧ ವ್ಯಕ್ತಪಡಿಸಿದರು. ರೈತ ಮುಖಂಡ ವೀರಭದ್ರ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Kshetra Samachara
17/06/2026 03:01 pm
LOADING...