ಕಾಗವಾಡ:ತಾಲೂಕಿನ ಶೇಡಬಾಳದ ಸನ್ಮತಿ ಪ್ರೌಢಶಾಲೆಯಲ್ಲಿ ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀಗುಡಿಯ 14 ವಯೋಮಾನದ ವಿದ್ಯಾರ್ಥಿನಿಯರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಸದರಿ ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕರಾದ ಎಲ್ ಕೆ ಅರವಾಡಿಯವರು ಮಾರ್ಗದರ್ಶನ ನೀಡಿ,ಶಿಕ್ಷಕಿ ಶ್ರೀಮತಿ ಸಂಧ್ಯಾ ಮಾಕನ್ನವರ ಪ್ರೋತ್ಸಾಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಇ ವೇಳೆ ದೈಹಿಕ ಶಿಕ್ಷಣದ ಪರಿವೀಕ್ಷಕರಾದ ಎಸ್ ಆರ್ ನೂರಜೆ,ಎಮ್ ವೈ ಪೂಜಾರಿ,ಸಿಆರ್ ಪಿ ರಾಜು ಕೋಳಿ,ರವಿ ನಾಂದಣಿ,ಸುಕುಮಾರ ಬಾಳಿಕಾಯಿ ಹಾಜರಿದ್ದರು.
ಮುಖ್ಯೋಪಾಧ್ಯಾಯರಾದ ಗಣಪತಿ ಅಂಬಿ,ಶಿಕ್ಷಕ ವೃಂದ,ಎಸ್ ಡಿಎಂಸಿ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು, ಸಮಸ್ತ ಪಾಲಕ ಬಂಧುಗಳು ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಮಸ್ಥ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
Kshetra Samachara
19/09/2026 09:30 pm
LOADING...