ಕಾರ್ಕಳ: ಸಾಣೂರು ರಾಮ ಮಂದಿರದ ಡಿವೈಡರ್ ಕ್ರಾಸಿನಲ್ಲಿ, ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ರಮಾನಾಥ್ ರೈ ಸೇರಿದಂತೆ ಕಾರು ಚಾಲಕ ಮತ್ತು ಅವರ ಆಪ್ತ ಸಹಾಯಕ ಗಾಯಗೊಂಡಿದ್ದಾರೆ.
ರಮಾನಾಥ್ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಮೂಡುಬಿದ್ರೆಯ ಹೆದ್ದಾರಿಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಎರಡು ವಾಹನಗಳ ಮುಂಭಾಗ ಜಖಂ ಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ಮಾಜಿ ಸಚಿವ ರಮಾನಾಥ ರೈ ಮತ್ತು ಇಬ್ಬರನ್ನು ಮಂಗಳೂರಿನ ಏನೋಪೋಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ವರದಿ : ಮಂಜು ಶೆಟ್ಟಿ ಸಾಣೂರು ಪಬ್ಲಿಕ್ ನೆಕ್ಸ್ಟ್ ಕಾರ್ಕಳ
PublicNext
20/09/2026 05:36 pm
LOADING...