", "articleSection": "Infrastructure,Health & Fitness,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1750080017-vay.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಡಿಬಂಡೆ : ಬಡವರ ಪಾಲಿಗೆ ಸರ್ಕಾರಿ ವೈದ್ಯರು ದೇವರು ಎಂದು ನಂಬಲಾಗುತ್ತದೆ. ಇತ್ತ ವೈದ್ಯೋ ನಾರಾಯಣೋ ಹರಿ ಎಂಬ ಮಾತೂ ಕೂಡಾ ವೈದ್ಯ ವೃತ್ತಿಯ ಮೌಲ್...Read more" } ", "keywords": "Chikkaballapur, hospital bribery, doctor accused, corruption in healthcare, maternity services, medical corruption, bribery allegations", "url": "https://dashboard.publicnext.com/node" } ಚಿಕ್ಕಬಳ್ಳಾಪುರ : ಹೆರಿಗೆಗೆ ಲಂಚ ಪೀಕುತ್ತಿರುವ ವೈದ್ಯರು!?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ಹೆರಿಗೆಗೆ ಲಂಚ ಪೀಕುತ್ತಿರುವ ವೈದ್ಯರು!?

ಗುಡಿಬಂಡೆ : ಬಡವರ ಪಾಲಿಗೆ ಸರ್ಕಾರಿ ವೈದ್ಯರು ದೇವರು ಎಂದು ನಂಬಲಾಗುತ್ತದೆ. ಇತ್ತ ವೈದ್ಯೋ ನಾರಾಯಣೋ ಹರಿ ಎಂಬ ಮಾತೂ ಕೂಡಾ ವೈದ್ಯ ವೃತ್ತಿಯ ಮೌಲ್ಯವನ್ನು ಸಾರಿ ಹೇಳುತ್ತದೆ.

ಉಚಿತವಾಗಿ ಬಡವರಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ವೈದ್ಯರು ಲಂಚಾವತಾರಿಯಾಗಿದ್ದಾರೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಲೇ ಇವೆ. ಹೌದು ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ಎಗ್ಗಿಲ್ಲದೆ ನಡೆಯುತ್ತಿದೆ. ದುಡ್ಡುಕೊಟ್ಟರೆ ಮಾತ್ರ ಟ್ರಿಟ್ಮೆಂಟ್ ಕೊಡ್ತಾರೆ ಆರೋಗ್ಯಾಧಿಕಾರಿ ಡಾ ನರಸಿಂಹಮೂರ್ತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಗರ್ಭ ಕೋಶ ಶಸ್ತ್ರಚಿಕಿತ್ಸೆ ಗೆ ಇಂತಿಷ್ಟು ಹಣ ನಿಗದಿ ಮಾಡಿ ಡಾಕ್ಟರ್ ಗಳ ಲಂಚಾವತಾರ. ಲಂಚ ಕೊಟ್ರೆ ಮಾತ್ರ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅವು ಇಂದು ಪ್ರತ್ಯಕ್ಷವಾಗಿ ಕ್ಯಾಮೆರಾ ಕಣ್ಣಿಗೆ ಕಾಣುತ್ತಿದೆ.

ಡಾ ನರಸಿಂಹಮೂರ್ತಿ ತಜ್ಞ ವೈದ್ಯರಲ್ಲದಿದ್ದರೂ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದಾರೆ. ಲಂಚ ಪಡೆಯುತ್ತಿರುವ ವೀಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದು. ಸಾವಿರ ಗಟ್ಟಲೆ ಲಂಚದ ಹಣ ಜೇಬಿಗಿಳಿಸುತ್ತಿರುವ ಡಾಕ್ಟರ್. ಬ್ರೋಕರ್ ಗಳನ್ನ ಇಟ್ಟುಕೊಂಡು ದಂಧೆ ನಡೆಸುತ್ತಿರುವ ಗುಡಿಬಂಡೆ ತಾಲ್ಲೂಕು ವೈದ್ಯಾಧಿಕಾರಿ ಡಾ ನರಸಿಂಹಮೂರ್ತಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Manjunath H D
PublicNext

PublicNext

16/06/2025 06:50 pm

Cinque Terre

31.87 K

Cinque Terre

0

ಸಂಬಂಧಿತ ಸುದ್ದಿ