ಶಿಗ್ಗಾವಿ: ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಕಡೆಗೆ ಹೋಗುವ ಮುಖ್ಯ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಭಾರಿ ಹಳ್ಳ ಗುಂಡಿಗಳು ಬಿದ್ದಿದ್ದು ಮಳೆ ಬಂದರಂತೂ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಂದ್ರೆ ಹರಸಾಹಸವೇ ನಡೆಸಬೇಕಾಗುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಗ್ಯಾರಂಟಿ. ರಾಜ್ಯ ಹೆದ್ದಾರಿಗೆ ಸೇರುವ ಈ ರಸ್ತೆಗಳ ಸ್ಥಿತಿಯೇ ಹೀಗಾದ್ರೆ ಇತರ ರಸ್ತೆಗಳ ಗತಿಯೇನು..? ಎನ್ನುವುದು ಸಾರ್ವಜನಿಕರ ಪ್ರಶ್ನೆ ಯಾಗಿದೆ. ಮೊನ್ನೆ ಒಂದು ವಾರದ ಹಿಂದೆ ನೆಪಮಾತ್ರಕ್ಕೆ ಮಣ್ಣು ಹಾಕಿ ಮುಚ್ಚಿ ಕೈ ತೊಳೆದುಕೊಂಡು ಹೋಗಿದ್ದು ಇಲ್ಲಿಯ ಸಾರ್ವಜನಿಕರ ಅಸಮಾಧಾನ ಕಾರಣವಾಗಿದೆ. ಕೂಡಲೇ ಸಂಬಂಧಿಸಿದವರು ಶಾಶ್ವತ ಪರಿಹಾರ ನೀಡಲು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ : ರಮೇಶ್ ಸೋಮಕ್ಕನವರ್ ಪಬ್ಲಿಕ್ ನೆಕ್ಸ್ಟ್ ಶಿಗ್ಗಾವಿ
PublicNext
23/06/2025 04:02 pm