", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/235762-1751041850-Untitled-design---2025-06-27T220025.052.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾನಗಲ್: ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ಬಳಿಯ ಪಂಪ್ಹೌಸ್ನಲ್ಲಿ ಮಹತ್ವಾಕಾಂಕ್ಷೆಯ ಹಿರೇಕಾಂಶಿ ಏತ ನೀರಾವರಿ ಯೋಜನೆಯ ಪಂಪ್ಗೆ ಶಾಸಕ ಶ್ರೀ...Read more" } ", "keywords": "Hirekansi lift irrigation project, MLA Srinivas Mane, Hangal development, irrigation project inauguration, water resources development, Karnataka irrigation projects, Srinivas Mane MLA, Hangal news", "url": "https://dashboard.publicnext.com/node" }
ಹಾನಗಲ್: ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ಬಳಿಯ ಪಂಪ್ಹೌಸ್ನಲ್ಲಿ ಮಹತ್ವಾಕಾಂಕ್ಷೆಯ ಹಿರೇಕಾಂಶಿ ಏತ ನೀರಾವರಿ ಯೋಜನೆಯ ಪಂಪ್ಗೆ ಶಾಸಕ ಶ್ರೀನಿವಾಸ ಮಾನೆ ವಿಶೇಷ ಪೂಜೆ ಸಲ್ಲಿಸಿ, ಚಾಲನೆ ನೀಡಿ ಅಚ್ಚುಕಟ್ಟು ಪ್ರದೇಶದ 77 ಕೆರೆಗಳಿಗೆ ನೀರು ಹರಿಸಿದರು.
ತಾಲೂಕಿನಲ್ಲಿ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಪರಿಣಾಮ ಕಳೆದ ವರ್ಷ ಅಂತರ್ಜಲ ಸುಧಾರಣೆ ಕಂಡು ಮೇ ಕೊನೆಯವರೆಗೂ ಕೆರೆ, ಕಟ್ಟೆಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿತ್ತು. ಸ್ಥಗಿತಗೊಂಡಿದ್ದ ಬಸಾಪುರ ಏತ ನೀರಾವರಿ ಯೋಜನೆಯನ್ನು ಸಹ ಪುನರಾರಂಭಿಸಿದ ಕಾರಣ ಆ ಭಾಗದ ರೈತರಿಗೆ ಅನುಕೂಲವಾಗಿದೆ. ಹೊಂಕಣ ಮತ್ತು ತಿಳವಳ್ಳಿ ಏತ ನೀರಾವರಿ ಯೋಜನೆಗಳ ಪಂಪ್ಗಳಿಗೂ ಕೆಲ ದಿನಗಳಲ್ಲಿ ಚಾಲನೆ ನೀಡಲಾಗುವುದು. ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಸಾಕಷ್ಟು ಮೊದಲೇ ಪಂಪ್ಗಳಿಗೆ ಚಾಲನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು.
ಯೋಜನೆಯಡಿ ತಾಲೂಕಿನ 9 ಗ್ರಾಮಗಳ 77 ಕೆರೆಗಳನ್ನು ವರದಾ ನದಿಯಿಂದ ೦.229 ಟಿಎಂಸಿ ನೀರು ಎತ್ತಿ ತುಂಬಿಸಲಾಗುವುದು. 107೦ ಎಚ್ಪಿ ಸಾಮರ್ಥ್ಯದ ಒಟ್ಟು 4 ಪಂಪ್ಗಳನ್ನು ಅಳವಡಿಸಲಾಗಿದ್ದು, 33 ಕೆವಿ ವಿದ್ಯುತ್ ಸರಬರಾಜು ಪಡೆಯಲಾಗಿದೆ. ಯೋಜನೆಯಿಂದ ಜನ, ಜಾನುವಾರು, ಕುಡಿಯುವ ನೀರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಉಪಯೋಗಕ್ಕೆ ನೀರು ಒದಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಎಇಇ ಪ್ರಹ್ಲಾದ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಪ್ರಮುಖರಾದ ಕರಬಸನಗೌಡ ಪಾಟೀಲ, ವಿರುಪಾಕ್ಷಪ್ಪ ದಾಳೇರ, ಸರ್ಫರಾಜ್ ಬಾಳೂರ, ಸುಭಾಸ್ ಕುರುಬರ, ಸಿದ್ದುಸ್ವಾಮಿ ಹಿರೇಮಠ, ಶಂಕ್ರಪ್ಪ ಕೋಣನಕೊಪ್ಪ, ಶಾರುಖ್ಖಾನ್, ಸದಾಶಿವ ದ್ವಾರಳ್ಳಿ, ಗಣಪತಿ ಕಲ್ಲಣ್ಣನವರ, ಪ್ರಕಾಶ ವಡ್ಡರ, ಮಂಜು ತಳವಾರ, ಉಮೇಶ ಕಬ್ಬೂರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.
PublicNext
27/06/2025 10:01 pm