", "articleSection": "Nature,Human Stories", "image": { "@type": "ImageObject", "url": "https://prod.cdn.publicnext.com/s3fs-public/229640-1750846441-bgm1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪಬ್ಲಿಕ್ ನೆಕ್ಸ್ಟ್ ವಿಶೇಷ ಬೆಳಗಾವಿ: ಅಂಬೋಲಿ ಫಾಲ್ಸ್ ತಮಗೆಲ್ಲಾ ಗೊತ್ತಿದೆ. ಅದಕ್ಕೂ ಮೊದಲು 10 ಕಿ.ಮೀ. ಅಂತರದಲ್ಲಿ ಬರುವ ಈ ವ್ಯೂವ್ ಪಾಯಿ...Read more" } ", "keywords": "Belagavi tourist places, best destinations in Belagavi, travel spots in Karnataka, unique tourist attractions, Belagavi travel guide, offbeat places to visit, Karnataka tourism.", "url": "https://dashboard.publicnext.com/node" }
ಪಬ್ಲಿಕ್ ನೆಕ್ಸ್ಟ್ ವಿಶೇಷ
ಬೆಳಗಾವಿ: ಅಂಬೋಲಿ ಫಾಲ್ಸ್ ತಮಗೆಲ್ಲಾ ಗೊತ್ತಿದೆ. ಅದಕ್ಕೂ ಮೊದಲು 10 ಕಿ.ಮೀ. ಅಂತರದಲ್ಲಿ ಬರುವ ಈ ವ್ಯೂವ್ ಪಾಯಿಂಟ್ ನೋಡಲು ಮಿನಿ ಜೋಗದಂತೆ ಕಾಣುತ್ತದೆ. ಅಂಬೋಲಿಗೆ ಹೋದವರು ಇಲ್ಲಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ಹಾಗಾದ್ರೆ ಯಾವುದು ಈ ಪ್ರವಾಸಿಗರ ಫೇವರೇಟ್ ಸ್ಪಾಟ್. ಇಲ್ಲಿದೆ ನೋಡಿ.
ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟವು ಕೇವಲ ತನ್ನ ಪ್ರಕೃತಿ ಸೌಂದರ್ಯ, ದಟ್ಟ ಮಂಜು, ಹಸಿರು ಹುಲ್ಲಿನ ಗುಡ್ಡ, ಜಲಪಾತಗಳಿಂದ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ಹಲವು ವಿಸ್ಮಯಗಳಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ತಮಗೆ ನಾವು ತೋರಿಸುತ್ತಿರುವ ಪ್ರವಾಸೀ ತಾಣವಾಗಿರುವ ಕವಳೆಸಾದ್ ತನ್ನ ವಿಭಿನ್ನತೆಯಿಂದಲೇ ಗುರುತಿಸಿಕೊಂಡಿದೆ.
ಬೆಳಗಾವಿಯಿಂದ ಕೇವಲ 60 ಕಿಮೀ. ದೂರದಲ್ಲಿರುವ ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲ್ಲೂಕಿನಲ್ಲಿ ಬರುವ ಕವಳೆಸಾದ್ ವ್ಯೂವ್ ಪಾಯಿಂಟ್ ಹಚ್ಚ ಹಸಿರಿನ ಗುಡ್ಡದಲ್ಲಿ ಹತ್ತಾರು ಚಿಕ್ಕ ಚಿಕ್ಕ ಜಲಪಾತಗಳು ಕಾಣಸಿಗುತ್ತವೆ. ತುಂಬಾ ಆಳ ಮತ್ತು ಅಗಲವಾದ ಪ್ರದೇಶದಲ್ಲಿ ಚಾಚಿಕೊಂಡಿರುವ ಈ ಪ್ರದೇಶವು ತುಂಬಾ ವಿಶಾಲವಾಗಿದೆ. ಸುರಿಯುವ ಮಳೆ, ಸುತ್ತಲೂ ಹಚ್ಚ ಹಸಿರಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಗಾಳಿಯ ರಭಸಕ್ಕೆ ಕೆಳಗಿನಿಂದ ಮೇಲಕ್ಕೆ ಚಿಮ್ಮುವ ನೀರು ಪ್ರವಾಸಿಗರನ್ನು ಕುಣಿಯುವಂತೆ ಮಾಡುತ್ತದೆ. ಇನ್ನು ಹಗುರ ವಸ್ತುಗಳನ್ನು ಪಾತಾಳಕ್ಕೆ ಎಸೆದು ಜನರು ಸಖತ್ ಎಂಜಾಯ್ ಮಾಡುತ್ತಾರೆ. ಕಾಶ್ಮೀರ ಏಕೆ ಹೋಗ್ಬೇಕು ಕಾಶ್ಮೀರಕಿಂತ ಹೆಚ್ಚು ವಿಸ್ಮಯ, ವಿಭಿನ್ನವಾಗಿದೆ ಈ ಪ್ರವಾಸೀ ತಾಣ
ಮುಂಗಾರು ಮಳೆ ಆರಂಭವಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಫೋಟೊ ತೆಗೆಸಿಕೊಂಡು, ಪ್ರಕೃತಿ ಸೌಂದರ್ಯವನ್ನು ಸವಿದು ಸಂಭ್ರಮಿಸುತ್ತಿದ್ದಾರೆ. ದೂರದ ಕಾಶ್ಮೀರ, ಹಿಮಾಚಲ ಪ್ರದೇಶಕ್ಕೆ ನಮಗೆ ಹೋಗಲು ಆಗಲ್ಲ. ಅಲ್ಲಿನ ವಾತಾವರಣ ಇಲ್ಲಿಯೇ ಕಣ್ತುಂಬಿಕೊಳ್ಳಬಹುದು ಅಂತಾ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರವಾಸಿಗರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಪ್ರವಾಸ ಮಾಡುವವರು ಒಂದು ಸಲ ಪಶ್ಚಿಮ ಘಟ್ಟ ಪ್ರದೇಶದ ವಿಸ್ಮಯ ನೋಡಲು ಬರಬೇಕು. ಅದರಲ್ಲೂ ನೀವು ಕವಳೆಸಾದ್ ಪಾಯಿಂಟ್ ಮಿಸ್ ಮಾಡ್ದೆ ನೋಡಿ. ಮಿಸ್ ಮಾಡಿದ್ರೆ ಮತ್ತೆ ಮುಂದಿನ ವರ್ಷ ಮಳೆಗಾಲ ಬರುವವರೆಗೆ ಕಾಯಬೇಕಾಗುತ್ತೆ.
ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
25/06/2025 03:44 pm