", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1750943409-32.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mahantesh Alnavar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮೂರು: ಪಟ್ಟಣದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಬಡವರ ಕಾಮಧೇನು ಆಗ...Read more" } ", "keywords": "NY Gopalakrishna, Molakalmuru MLA, BJP criticism, Karnataka politics, Minister Sriramulu.", "url": "https://dashboard.publicnext.com/node" } ಮೊಳಕಾಲ್ಮೂರು: ಶ್ರೀರಾಮುಲು ಸಚಿವನಾಗಿದ್ದಾಗ 80 ಜನ ಪಿಎಗಳಿದ್ದರು - ಬಿಜೆಪಿಗರ ವಿರುದ್ದ ಶಾಸಕ ಎನ್. ವೈ. ಗೋಪಾಲಕೃಷ್ಣ ಗರಂ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು: ಶ್ರೀರಾಮುಲು ಸಚಿವನಾಗಿದ್ದಾಗ 80 ಜನ ಪಿಎಗಳಿದ್ದರು - ಬಿಜೆಪಿಗರ ವಿರುದ್ದ ಶಾಸಕ ಎನ್. ವೈ. ಗೋಪಾಲಕೃಷ್ಣ ಗರಂ

ಮೊಳಕಾಲ್ಮೂರು: ಪಟ್ಟಣದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಬಡವರ ಕಾಮಧೇನು ಆಗಿದೆ. ಕೂಲಿ ಕಾರ್ಮಿಕರು ,ವಿದ್ಯಾರ್ಥಿಗಳು ಬಡವರ್ಗದವರ ಹಸಿವು ನೀಗಿಸಲಿದೆ ಎಂದರು.

ತಾಲ್ಲೂಕಿನಲ್ಲಿ ಈ ಹಿಂದಿನ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಬಂದರೂ ಸಚಿವ ಶ್ರೀರಾಮಲು ಇಚ್ಚೆ ತೋರದ ಕಾರಣ ನೆನೆಗುದಿಗೆ ಬಿದ್ದಿತ್ತು. ಬಿಜೆಪಿ ಅವಧಿಯಲ್ಲಿ ಶ್ರೀರಾಮುಲುಗೆ 70 ರಿಂದ 80 ಜನ ಪಿಎಗಳು ಇದ್ದರು, ಅವರು ಬಂದು ಹೋದ ನಂತರ ಊರಿಗೆ ಒಬ್ಬರಂತೆ ಸೃಷ್ಟಿ ಮಾಡಿ ಹೋಗಿದ್ದಾರೆ. 2013ರಲ್ಲಿ ನನ್ನ ಸೋಲಿಸುವ ಭರದಿಂದ ತಿಪ್ಪೇಸ್ವಾಮಿಯನ್ನು ಗೆಲ್ಲಿಸಿದ್ದು ಬಿಟ್ಟರೆ ತಿಪ್ಪೇಸ್ವಾಮಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಮನಸ್ಸು ಜನರಿಗಿರಲಿಲ್ಲ. ಸೋತು ಸುಣ್ಣವಾಗಿದ್ದ ತಿಪ್ಪೇಸ್ವಾಮಿಯನ್ನು ಅಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಎಂದು ಮಾಜಿ ಶಾಸಕ ಮತ್ತು ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು.

ನಾನು ಯೂ ಟರ್ನ್ ಹೋಗುವವನಲ್ಲ. ಒನ್ ವೇ ನಲ್ಲಿ ಹೋಗುವವನು. ವಿಧಾನಸೌಧಕ್ಕೆ ಹೋಗುವುದಿಲ್ಲ ಎಂದು ನನ್ನನ್ನು ದೂರುತ್ತಿರುವ ಬಿಜೆಪಿಗರಿಗೆ ನಾನು ವಿಧಾನ ಸಭಾ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವುದು ಅರಿವಿರಲಿ.ವಿರೋಧ ಪಕ್ಷ ಮತ್ತು ಆಡಳಿತ ಪಕ್ಷವನ್ನು ಕಂಟ್ರೋಲ್ ಮಾಡಿದ್ದೇನೆ ಎಷ್ಟೋ ಜನ ಶಾಸಕರುಗಳಿಗೆ ಟೀಚ್ ಮಾಡಿದ್ದೇನೆ, ನನ್ನ ವಿರುದ್ಧ ಮಾತನಾಡುವವರು ನಾನು ರಾಜಕೀಯ ಮಾಡುವಾಗ ಹುಟ್ಟಿಯೇ ಇರಲಿಲ್ಲ. ನನ್ನ ರಾಜಕೀಯ ಅನುಭವವನ್ನು ಪ್ರಶ್ನೆ ಮಾಡುವ ನೈತಿಕತೆ ನಿಮಗಿಲ್ಲ ಎಂದು ಹರಿಹಾಯ್ದರು.

ಮಾಜಿ ಪ.ಪಂ ಅಧ್ಯಕ್ಷ ಪ್ರಕಾಶ್ ಮಾತನಾಡಿ,ಇಂದಿರಾ ಕ್ಯಾಂಟೀನ್ ಮಾಡಲು ಬಿಡದ ಬಿಜೆಪಿಯವರು ಶಾಸಕರನ್ನು ದೂರುತ್ತಿದ್ದಾರೆ. 2 ಎಕರೆ ಜಾಗ ಕೊಂಡ್ಲಹಳ್ಳಿಯ ಬಿಜೆಪಿ ಮುಖಂಡರ ಬಳಿ ಅಕ್ರಮವಾಗಿ ಸ್ವಾಧೀನದಲ್ಲಿತ್ತು. ಇದನ್ನು ಕಳೆದ ವರ್ಷ ತಹಶೀಲ್ದಾರ್ ರೂಪ ಅವರು ಸರಕಾರದ ವಶಕ್ಕೆ ಪಡೆದುಕೊಂಡಿದ್ದರು.ಇದನ್ನು ಸಹಿಸದೇ ಬಿಜೆಪಿಗರು ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ , ಆರ್ ಎಸ್ ಎಸ್, ಬಜರಂಗದಳ ಇದ್ದಲ್ಲಿ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತೀರ. ನಾಲ್ಕು ಹೋಬಳಿಗಳಲ್ಲಿ ನಮ್ಮ ಶಾಸಕರ ಬಳಿ ಈಗಾಗಲೇ ಬಿಜೆಪಿಯ 80% ಕಾರ್ಯಕರ್ತರು ಇದ್ದಾರೆ. ಹೀಗಾಗಿ ನೀವು ಹತಾಶೆಯಲ್ಲಿದ್ದೀರಿ ಎಂದು ವಾಗ್ಧಾಳಿ ನಡೆಸಿದರು.

Edited By : Somashekar
PublicNext

PublicNext

26/06/2025 06:40 pm

Cinque Terre

25.21 K

Cinque Terre

0

ಸಂಬಂಧಿತ ಸುದ್ದಿ