", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1751044060-suuu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಹುಲಿಗಳ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದ...Read more" } ", "keywords": "Gadag, tiger deaths, investigation demand, MP Basavaraj Bommai, wildlife conservation.", "url": "https://dashboard.publicnext.com/node" }
ಗದಗ: ಹುಲಿಗಳ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿಗಳ ಬಗ್ಗೆ ಸಮಾಜ ಮತ್ತು ಸರ್ಕಾರ ಎರಡೂ ಬಹಳ ಪ್ರಾಮುಖ್ಯತೆ ಕೊಡುತ್ತವೆ. ಯಾವುದಾದರೂ ಒಂದು ಹುಲಿ ಆಕಸ್ಮಿಕವಾಗಿ ಸಾವಿಗೀಡಾದರೆ ಬಹಳ ದೊಡ್ಡ ವಿಚಾರ. ಅಂತದರಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಸಾವಿಗೀಡಾಗಿರುವುದು ಆಘಾತಕಾರಿಯಾಗಿರುವ ವಿಷಯ. ಇಷ್ಟು ದೊಡ್ಡ ಪ್ರಮಾಣದ ಅನಾಹುತ ಆಗಿದೆಯೆಂದರೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಬಹಳ ಸ್ಪಷ್ಟವಾಗಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಹಳಷ್ಟು ಜನದಟ್ಟಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಹುಲಿ ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ರೆಸಾರ್ಟ್ ಗೆ ಅನುಮತಿ ನೀಡಿದ್ದಾರೆ. ಹುಲಿ ಸಂರಕ್ಷಿತ ಅರಣ್ಯದ ಬಳಿಯೇ ಜನರು ಪಿಕ್ ನಿಕ್ ಹೋಗುತ್ತಾರೆ. ಇಷ್ಟೆಲ್ಲಾ ಆದರೂ ಕೂಡ ಅರಣ್ಯ ಇಲಾಖೆಯವರು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳನ್ನು ಕಾಡಿಗೆ ಕಳಿಸಿ:
ಭಾರತೀಯ ಅರಣ್ಯ ಸೇವಾ ಅಧಿಕಾರಿಗಳನ್ನು ಬೆಂಗಳೂರಿನಿಂದ ಅರಣ್ಯಕ್ಕೆ ಕಳಿಸಬೇಕು. ನಾವಿದ್ದಾಗ ಎಲ್ಲ ಅರಣ್ಯ ಇಲಾಖೆ ಕಚೇರಿಗಳನ್ನು ಅರಣ್ಯ ಇರುವ ಕಡೆ ಸ್ಥಳಾಂತರ ಮಾಡಿದ್ದೇವು. ಈಗ ಮತ್ತೆ ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ. ಬಹುತೇಕ ಐಎಫ್ ಎಸ್ ಅಧಿಕಾರಿಗಳು ಬೆಂಗಳೂರಿನಲ್ಲಿಯೇ ಇದ್ದಾರೆ. ಗಾರ್ಡ್ ಗಳನ್ನು ಬಿಟ್ಟರೆ ಯಾರೂ ಕಾಡು ಕಾಯುವವರಿಲ್ಲ. ಎಲ್ಲ ಐಎಫ್ಎಸ್ ಅಧಿಕಾರಿಗಳು ಬರುತ್ತಾರೆ. ಬೇರೆ ಬೇರೆ ಹುದ್ದೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿಯೇ ಉಳಿಯುತ್ತಾರೆ. ಕಾಡಿನ ಬಗ್ಗೆ ಗಂಭೀರ ಆಡಳಿತ ನಡೆಸುವವರು ಯಾರು. ಅರಣ್ಯ ನಾಶ, ಅಕ್ರಮವಾಗಿ ಕಳ್ಳಸಾಗಾಣಿಕೆಯಾಗುತ್ತಿದೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ರೆಸಾರ್ಟ್ ಗಳು, ಜನದಟ್ಟಣೆ ಹೆಚ್ಚಾಗುತ್ತಿದೆ. ಇದಲ್ಲದೇ ಕಾಂಗ್ರೆಸ್ ಮಹಾನಾಯಕಿ ಆದೇಶದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕೊಡಬೇಕು ಎಂಬ ಒತ್ತಡ ಇದೆ. ಹುಲಿಗಳ ಸಾವು ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಯಾರು ತಪ್ಪಿರಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗಬೇಕು. ಹಿಂದೆ ಹುಲಿಗಳ ಚರ್ಮಕ್ಮಾಗಿ ಹುಲಿಗಳನ್ನು ಸಾಯಿಸಲಾಗುತ್ತಿತ್ತು. ಅಂತಹ ಘಟನೆ ಆಗಿದಿಯೋ ಇಲ್ಲವೋ ತಿಳಿಯಲು ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಶೂನ್ಯ
ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ ಎಂಬ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಕಾಂತ್ರಿಯಾಗುತ್ತೋ.. ಬ್ರಾಂತಿಯಾಗುತ್ತೋ ನೋಡೋಣ. ಈಗಾಗಲೇ ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬ್ರಾಂತಿಯಾಗಿದೆ. ಕಾಂಗ್ರೆಸ್ ಆಂತರಿಕ ವಿಷಯದ ಬಗ್ಗೆ ಹೆಚ್ಚು ಮಾತನಾಡಲ್ಲ. ಕಾಂಗ್ರೆಸ್ ಕಚ್ಚಾಟದಲ್ಲಿ ಅಭಿವೃದ್ಧಿಯೇ ಇಲ್ಲ. ಕಚ್ಚಾಟಕ್ಕೂ ಮುನ್ನ ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯವಾಗಿದೆ. ಸಾಲದ ಶೂಲಕ್ಕೆ ಕರ್ನಾಟಕ ಸಿಲುಕಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. 50 ರಿಂದ 60 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆಯಿಂದ ವಸೂಲಾಗಿದೆ. ಇಷ್ಟಾಗಿಯೂ ಹಣ ಸಾಲುತ್ತಿಲ್ಲ ಅಂದರೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
224 ಕ್ಷೇತ್ರಗಳಲ್ಲೂ ಭ್ರಷ್ಟಾಚಾರ
ಭ್ರಷ್ಟಾಚಾರ ವಿಷಯವಾಗಿ ನನ್ನ ಮೇಲೆ ನೇರ ಆರೋಪ ಇಲ್ಲ ಎಂದು ಸಚಿವ ಜಮೀರ್ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಬಿ.ಆರ್ . ಪಾಟೀಲ ಕ್ಷೇತ್ರ ಅಲ್ಲ. 224 ವಿಧಾನಸಭಾ ಕ್ಷೇತ್ರದಲ್ಲೂ ಅವ್ಯವಹಾರ ನಡೆದಿದೆ..
ಇಲಾಖೆಯಲ್ಲಿ ಗೃಹ ಹಂಚಿಕೆಯಲ್ಲಿ ಅವ್ಯವಹಾರ ನಡೆದರೆ ಯಾರು ಹೊಣೆ. ನನಗೆ ಸಂಬಂಧ ಇಲ್ಲ ಅಂದ್ರೆ ಏನ್ ಅರ್ಥ.
ಎಲ್ಲಿ ಭ್ರಷ್ಟಾಚಾರ ಆಗಿದೆ ಅಂತ ತನಿಖೆ ಮಾಡಿ ತಪ್ಪಿತಸ್ಥರನ್ನು ಒಳಗೆ ಹಾಕಿದರೆ ಹೌದು ಎನ್ನಬಹುದು. ಶಾಸಕ ಬಿ. ಆರ್. ಪಾಟೀಲರು ಹೇಳಿ 15 ದಿನವಾಯಿತು. ಯಾವುದೇ ಕ್ರಮ ಆಗಿಲ್ಲ ಅಂದರೆ ತೆಳಗಿನಿಂದ ಮೇಲಿನವರೆಗೆ ಎಲ್ಲರ ಪಾಲಿದೆ ಅಂತ ಅರ್ಥವಾಯಿತಲ್ಲ. ಸಿಎಂ ಕರೆದು ಮಾತಾಡುತ್ತಾರೆ ಅಂತಾರೆ. ಕರೆದು ಮಾತನಾಡಿದರೆ ಅದು ಹೇಗೆ ನಿಯಂತ್ರಣವಾಗುತ್ತೆ. ಸಿಎಂ ಇಷ್ಟೊಂದು ಅಸಹಾಯಕರಾಗುತ್ತಾರೆ ಅಂತ ಗೊತ್ತಿರಲಿಲ್ಲ. ಅತ್ಯಂತ ಅಸಹಾಯಕ, ದೌರ್ಬಲ್ಯದಿಂದ ಕೂಡಿರುವ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
PublicNext
27/06/2025 10:37 pm