", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751213187-aki.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಕಾಂಗ್ರೆಸ್ ನಲ್ಲಿ ಅಷ್ಟೇ ಅಲ್ಲ, ಬಿಜೆಪಿಯಲ್ಲೂ ಕ್ರಾಂತಿಯಾಗುತ್ತದೆ ಅನ್ನೋ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಶಾಸಕ ಹಾಗೂ ಮಾಜಿ ಸಚಿವ ಸಿ.ಸ...Read more" } ", "keywords": "Gadag CM ignores KN Rajanna, CC Patil on CM's statement, KN Rajanna controversy, Gadag politician CC Patil, CM's neglect comment.", "url": "https://dashboard.publicnext.com/node" }
ಗದಗ: ಕಾಂಗ್ರೆಸ್ ನಲ್ಲಿ ಅಷ್ಟೇ ಅಲ್ಲ, ಬಿಜೆಪಿಯಲ್ಲೂ ಕ್ರಾಂತಿಯಾಗುತ್ತದೆ ಅನ್ನೋ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಎನ್. ರಾಜಣ್ಣ ಹಿರಿಯ ಸಚಿವರು. ಅವರು ಬರೀ ತಮ್ಮ ಪಾರ್ಟಿದು ನೋಡಿಕೊಂಡ್ರೆ ಸಾಕು. ನಮ್ಮ ಪಾರ್ಟಿದು ನೋಡೋದು ಬೇಡ.
ಇಷ್ಟು ದಿನ ವಿಧಾನ ಸೌಧದ ಕಡೆ ಬಂದಿರಲಿಲ್ಲ. ಮೊನ್ನೆ ಬಂದಿದ್ದಾರೆ ಮಾತಾಡಿ ಬಿಟ್ಟಿದ್ದಾರೆ. ಅದನ್ನ ಈಗ ಅರಗಿಸಿಕೊಳ್ಳೋದು ಕಷ್ಟ ಆಗಿದೆ. ಅವರ ನಾಯಕರಾದ ಸಿಎಂ ಸಿದ್ದರಾಮಯ್ಯನವರೇ ನೆಗ್ಲೆಟ್ ಇಟ್, ಇಗ್ನೋರ್ ಇಟ್ ಅಂತಾ ಹೇಳಿದ್ದಾರೆ. ಅವರಿಗೆ ಸ್ವಲ್ಪ ಮಾತನಾಡೋ ಹವ್ಯಾಸ ಜಾಸ್ತಿ. ನಡುವೆ ಬಹಳ ಮಾತನಾಡ್ತಿದ್ರು, ಹೈಕಮಾಂಡ್ ವಾರ್ನಿಂಗ್ ಕೊಟ್ಟಿತ್ತೋ ಏನೋ ಸುಮ್ಮನಾಗಿದ್ರು. ಈಗ ಮತ್ತೆ ಎರಡು ಮೂರು ದಿನದಿಂದ ಪ್ರಾರಂಭ ಆಗಿದೆ.
ರಾಜಣ್ಣ ರಾಜಕೀಯದಲ್ಲಿ ಸ್ವಲ್ಪ ಮಾತನಾಡೋದು ಜಾಸ್ತಿ ಆಗಿದೆ. ಕಾಂಗ್ರೆಸ್ ನಲ್ಲಿ ಕ್ರಾಂತಿ ಆಗುತ್ತಿದೆ. ಸೆಪ್ಟೆಂಬರ್ ವರೆಗೂ ಯಾಕೆ ನೋಡಬೇಕು, ಈಗ ದಿನಾಲೂ ನಡೀತಿದೆ. ಕಲ್ಯಾಣ ಕರ್ನಾಟಕ ಆಯ್ತು, ಚಿಕ್ಕೋಡಿ ಭಾಗದಲ್ಲಿ ಆಯ್ತು, ಬೆಂಗಳೂರು ಭಾಗದಲ್ಲಿ ಎಲ್ಲಾ ಕಡೆ ಕ್ರಾಂತಿ ಆಗ್ತಿದೆ. ಕಾಂಗ್ರೆಸ್ ನಲ್ಲಿ ಇದೇ ಕ್ರಾಂತಿ ಹೆಚ್ಚಾಗುತ್ತಾ ಹೋಗುತ್ತೆ, ಕ್ರಾಂತಿ ಅಂದಾಕ್ಷಣ ಒಮ್ಮೆಲೆ ಪ್ರಥ್ವಿ ಮುಳುಗೋದಿಲ್ಲ. ಬಹುತೇಕ ರಾಜಣ್ಣ ಅವರಿಗೆ ಸುಳಿವು ಸಿಕ್ಕಿರಬೇಕು. ಕಾಂಗ್ರೆಸ್ ನಲ್ಲಿ ಕ್ರಾಂತಿ ಪ್ರಾರಂಭ ಆಗಿದೆ. ಸೆಪ್ಟೆಂಬರ್ ನಲ್ಲಿ ದೊಡ್ಡ ಪ್ರಳಯ ಆಗುತ್ತೆ ಅಂತಾ. ಪ್ರಳಯ ಯಾರನ್ನ ಮುಳುಗಿಸುತ್ತೋ ನನಗೆ ಗೊತ್ತಿಲ್ಲ ಎಂದರು.
ಇನ್ನು ಮಾಧುಸ್ವಾಮಿ, ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತುಮಕೂರಿನ ರಾಜಕಾರಣದಲ್ಲಿ ವೈಮನಸ್ಸು ಇದ್ದ ಹಾಗೆ ಕಾಣುತ್ತೆ ಅನಿಸುತ್ತೆ. ಸಿಎಂ ಭೇಟಿ ಆಗಿದ್ದಾರೆ, ಯಾವ ಕಾರಣಕ್ಕಾಗಿ ಭೇಟಿ ಆಗಿದ್ದಾರೋ ಗೊತ್ತಿಲ್ಲ ಎಂದರು. ಈ ವೇಳೆ ಅನಿಲ್ ಅಬ್ಬಯ್ಯ, ಎಮ್.ಎಸ್. ಕರಿಗೌಡ್ರ, ಪ್ರಭು ಹಳ್ಳಿಗುಡಿ, ಸಾಗರ ಹಳ್ಳಿಕೇರಿ. ರಾಜು ಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
PublicNext
29/06/2025 09:38 pm