", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1751196953-gdg.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಪಟ್ಟಣದ ಹಾವಳಿ ಹನಮಂತ ದೇವಸ್ಥಾನದಿಂದ ಬ್ರಹ್ಮ ದೇವರ ಸರ್ಕಲ್ರವರೆಗೆ ರಸ್ತೆ ಕಾಮಗಾರಿಗೆ ಯಾರು ಅಡ್ಡಿಪಡಿಸುತ್ತಿಲ್ಲ. ಒಳ್ಳೆಯ ಗುಣಮಟ್ಟದ ಕ...Read more" } ", "keywords": "Gadag MLA controversy, construction quality issues, public works department, MLA questions, infrastructure development Gadag.", "url": "https://dashboard.publicnext.com/node" }
ಗದಗ: ಪಟ್ಟಣದ ಹಾವಳಿ ಹನಮಂತ ದೇವಸ್ಥಾನದಿಂದ ಬ್ರಹ್ಮ ದೇವರ ಸರ್ಕಲ್ರವರೆಗೆ ರಸ್ತೆ ಕಾಮಗಾರಿಗೆ ಯಾರು ಅಡ್ಡಿಪಡಿಸುತ್ತಿಲ್ಲ. ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ಎಂದು ಹೇಳುವುದು ನಮ್ಮ ತಪ್ಪಾ ಶಾಸಕರೇ? ನಾವು ರಸ್ತೆಯ ಕಾಮಗಾರಿಗೆ ಮಣ್ಣು ಕೊಡುವುದಕ್ಕೆ ನಮ್ಮ ಹತ್ತಿರ ಗುಡ್ಡವೂ ಇಲ್ಲ, ಮಣ್ಣು ಕೂಡ ಇಲ್ಲ. ಸಮ್ಮನೆ ಜನರನ್ನು ದಾರಿ ತಪ್ಪಿಸಬೇಡಿ ಶಾಸಕರೇ ಎಂದು ಮುಖಂಡರಾದ ಸುರೇಶ ನಂದೆಣ್ಣವರ ಕಿಡಿಕಾರಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ರಸ್ತೆಯಲ್ಲಿ ಹಿಂದೂ ಮುಸ್ಲಿಮರ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ. ಆದ್ದರಿಂದ ರಸ್ತೆಯನ್ನು ಸರಿಯಾದ ರೀತಿಯಲ್ಲಿ ಕಳಪೆ ಆಗದೆ ಅಭಿವೃದ್ಧಿ ಮಾಡಿ ಎಂದು ಹೇಳುವುದು ತಪ್ಪಾ ಶಾಸಕರೇ? ತಮ್ಮ ಹಿತಾಶಕ್ತಿಯಿಂದ ಕಾಮಗಾರಿಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಹೇಳಿದ್ದೀರಿ. ಈ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಂಜುನಾಥ ಮಾಗಡಿ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಹಳಷ್ಟು ಇದೆ. ಮೊದಲು ನೀರಿನ ಸಮಸ್ಯೆಯನ್ನು ಬಗೆಹರಿಸಿ, ಸುಖಾಸುಮ್ಮನೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಮೇಲೆ ತಪ್ಪು ಮಾಹಿತಿ ನೀಡಬೇಡಿ. ಇಲ್ಲಿ ಯಾರದು ಗುಡ್ಡ ಇಲ್ಲ ಮಣ್ಣು ಇಲ್ಲ ಸುಮ್ಮನೆ ದ್ವೇಷದ ರಾಜಕೀಯ ಮಾಡಬೇಡಿ. ಒಂದು ವೇಳೆ ದ್ವೇಷದ ರಾಜಕೀಯ ಮಾಡುತ್ತೀರಿ ಎಂದರೆ ಅದಕ್ಕೆ ನಾವು ಹೋರಾಟ ಮಾಡುವುದಕ್ಕೆ ಸಿದ್ಧ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ ನಂದೆಣ್ಣವರ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಶಂಕ್ರಪ್ಪ ಗುರಿಕಾರ,ಗುರಪ್ಪ ಮುಳುಗುಂದ, ಶಿವಪ್ಪ ಡಂಬಳ ಗಂಗಪ್ಪ ಅಂಕಲಿ, ಛಾಯಪ್ಪ ಬಸಾಪುರ,ಸುಭಾನ ಹೊಂಬಳ, ವಿಶ್ವನಾಥ ವಾರದ, ಮಂಜುನಾಥ ಮುಳುಗುಂದ, ಸುರೇಶ ಹಟ್ಟಿ, ರಾಜು ಲಿಂಬಿಕಾಯಿ,ಪವನ ಬಂಕಾಪುರ,ಮಾಲತೇಶ ಕರ್ಜಕಣ್ಣವರ, ಶಂಕ್ರಣ್ಣ ಮುಳುಗುಂದ, ವಿರೂಪಾಕ್ಷಪ್ಪ ಬಳಿಗಾರ ಅನೇಕರು ಇದ್ದರು.
PublicNext
29/06/2025 05:05 pm