", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751212523-hgf.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಕಾಂಗ್ರೆಸ್ನಲ್ಲಿ ಅಷ್ಟೇ ಅಲ್ಲ ಬಿಜೆಪಿಯಲ್ಲೂ ಕ್ರಾಂತಿಯಾಗುತ್ತಿದೆ ಅನ್ನೋ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಶಾಸಕ ಹಾಗೂ ಮಾಜಿ ಸಚಿವ ಸಿ.ಸ...Read more" } ", "keywords": "Gadag Congress crisis, Congress party internal conflict, political turmoil in Gadag, Congress leadership dispute, Gadag politician comments.", "url": "https://dashboard.publicnext.com/node" }
ಗದಗ: ಕಾಂಗ್ರೆಸ್ನಲ್ಲಿ ಅಷ್ಟೇ ಅಲ್ಲ ಬಿಜೆಪಿಯಲ್ಲೂ ಕ್ರಾಂತಿಯಾಗುತ್ತಿದೆ ಅನ್ನೋ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ ಮಾತಿನ ತಿರುಗೇಟು ನೀಡಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಎನ್ ರಾಜಣ್ಣ ಅವರು ಹಿರಿಯ ಸಚಿವರು. ಅವರು ಬರೀ ತಮ್ಮ ಪಾರ್ಟಿದು ನೋಡಿಕೊಂಡ್ರೆ ಸಾಕು. ನಮ್ಮ ಪಾರ್ಟಿದು ನೋಡೋದು ಬೇಡ. ಇಷ್ಟು ದಿನ ವಿಧಾನ ಸೌಧದ ಕಡೆ ಬಂದಿರಲಿಲ್ಲ. ಮೊನ್ನೆ ಬಂದಿದ್ದಾರೆ ಮಾತಾಡಿ ಬಿಟ್ಟಿದ್ದಾರೆ. ಅದನ್ನ ಈಗ ಅರಗಿಸಿಕೊಳ್ಳೋದು ಕಷ್ಟ ಆಗಿದೆ. ಅವರ ನಾಯಕರಾದ ಸಿಎಂ ಸಿದ್ದರಾಮಯ್ಯ ಅವರೇ, 'ನೆಗ್ಲೆಟ್ ಇಟ್, ಇಗ್ನೋರ್ ಇಟ್' ಅಂತಾ ಹೇಳಿದ್ದಾರೆ. ಅವರಿಗೆ ಸ್ವಲ್ಪ ಮಾತನಾಡೋ ಹವ್ಯಾಸ ಜಾಸ್ತಿ. ನಡುವೆ ಬಹಳ ಮಾತನಾಡ್ತಿದ್ರು, ಹೈಕಮಾಂಡ್ ವಾರ್ನಿಂಗ್ ಕೊಟ್ಟಿತ್ತೋ ಏನೋ ಸುಮ್ಮನಾಗಿದ್ರು. ಈಗ ಮತ್ತೆ ಎರಡು ಮೂರು ದಿನದಿಂದ ಪ್ರಾರಂಭವಾಗಿದೆ. ರಾಜಣ್ಣ ರಾಜಕೀಯದಲ್ಲಿ ಸ್ವಲ್ಪ ಮಾತನಾಡೋದು ಜಾಸ್ತಿ ಆಗಿದೆ. ಕಾಂಗ್ರೆಸ್ ನಲ್ಲಿ ಕ್ರಾಂತಿ ಆಗುತ್ತಿದೆ. ಸಪ್ಟೆಂಬರ್ ವರೆಗೂ ಯಾಕೆ ನೋಡಬೇಕು, ಈಗ ದಿನಾಲೂ ನಡೀತಿದೆ. ಕಲ್ಯಾಣ ಕರ್ನಾಟಕ ಆಯ್ತು, ಚಿಕ್ಕೋಡಿ ಭಾಗದಲ್ಲಿ ಆಯ್ತು, ಬೆಂಗಳೂರು ಭಾಗದಲ್ಲಿ ಎಲ್ಲಾ ಕಡೆ ಕ್ರಾಂತಿ ಆಗ್ತಿದೆ. ಕಾಂಗ್ರೆಸ್ ನಲ್ಲಿ ಇದೇ ಕ್ರಾಂತಿ ಹೆಚ್ಚಾಗುತ್ತಾ ಹೋಗತ್ತೆ, ಕ್ರಾಂತಿ ಅಂದಾಕ್ಷಣ ಒಮ್ಮೆಲೆ ಪೃಥ್ವಿ ಮುಳುಗೋದಿಲ್ಲ. ಬಹುತೇಕ ರಾಜಣ್ಣ ಅವರಿಗೆ ಸುಳಿವು ಸಿಕ್ಕಿರಬೇಕು. ಕಾಂಗ್ರೆಸ್ ನಲ್ಲಿ ಕ್ರಾಂತಿ ಪ್ರಾರಂಭ ಆಗಿದೆ. ಸಪ್ಟೆಂಬರ್ ನಲ್ಲಿ ದೊಡ್ಡ ಪ್ರಳಯ ಆಗತ್ತೆ ಅಂತ ಪ್ರಳಯ ಯಾರನ್ನ ಮುಳುಗಿಸತ್ತೋ ನನಗೆ ಗೊತ್ತಿಲ್ಲ ಎಂದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಸಿ ಪಾಟೀಲ್ ಹೆಸರು ಕೇಳಿ ಬರ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದರು. ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಭಾರತೀಯ ಜನತಾ ಪಕ್ಷದ ನಾನೊಬ್ಬ ಶಿಸ್ತಿನ ಸಿಪಾಯಿ. ನನ್ನ ಸುದೀರ್ಘವಾದ ರಾಜಕೀಯ ಜೀವನದಲ್ಲಿ. ನಾನು ಯಾವತ್ತೂ ಪಕ್ಷದ ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿಲ್ಲ ಎಂದರು.
ಇನ್ನು ಮಾಧುಸ್ವಾಮಿ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತುಮಕೂರಿನ ರಾಜಕಾರಣದಲ್ಲಿ ವೈಮನಸ್ಸು ಇದ್ದ ಹಾಗೆ ಕಾಣತ್ತೆ ಅನಿಸತ್ತೆ. ಸಿಎಂ ಭೇಟಿ ಆಗಿದ್ದಾರೆ. ಯಾವ ಕಾರಣಕ್ಕಾಗಿ ಭೇಟಿ ಆಗಿದ್ದಾರೋ ಗೊತ್ತಿಲ್ಲ ಎಂದರು.
PublicNext
29/06/2025 09:25 pm