", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/386335_1751090999_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "9113093241" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ನೀರಿಗಾಗಿ ಬೀದಿಗಿಳಿದು ನಾರಿಯರ ಪ್ರತಿಭಟನೆ ಮಾಡಿದ ಘಟನೆ ಗದಗ ನಗರದ ಮುಳಗುಂದ ನಾಕಾ ಸರ್ಕಲ್ ನಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿಂದ ...Read more" } ", "keywords": "Water problem, Gadag water, Women, Protest, ", "url": "https://dashboard.publicnext.com/node" }
ಗದಗ: ನೀರಿಗಾಗಿ ಬೀದಿಗಿಳಿದು ನಾರಿಯರ ಪ್ರತಿಭಟನೆ ಮಾಡಿದ ಘಟನೆ ಗದಗ ನಗರದ ಮುಳಗುಂದ ನಾಕಾ ಸರ್ಕಲ್ ನಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿಂದ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಖಾಲಿ ಕೊಡಗಳ ಸಮೇತ ನಡು ರಸ್ತೆಯಲ್ಲಿ ಕುಳಿತು ಮಹಿಳೆಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗದಗ ನಗರದ 32ನೇ ವಾರ್ಡಿನ ಮಹಿಳೆಯರು, ವೃಧ್ಧರು ಸೇರಿದಂತೆ ಗರ್ಭಿಣಿಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಖಾಲಿ ಕೊಡಗಳ ಸಮೇತ ಬೀದಿಗಿಳಿದು ತಮ್ಮ ಅಳಲನ್ನು ತೋಡಿಕೊಂಡ್ರು.
ಪ್ರತಿಭಟನೆಯಲ್ಲಿ ವಾರ್ಡ ಸದಸ್ಯ ಹಾಗೂ ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ರು. ನಮಗೆ ನೀರು ಕೊಡಿ ಇಲ್ಲಾಂದ್ರೆ ರಸ್ತೆ ಬಿಟ್ಟು ಕದಲೋದಿಲ್ಲ ಅಂತಾ ಪಟ್ಟು ಹಿಡಿದಿದ್ರು. ಘಟನೆಯಿಂದ ಕೆಲಕಾಲ ಮುಳಗುಂದ ನಾಕಾದಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಹೀಗಾಗಿ ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸ್ ಸಿಬ್ಬಂದಿಗಳು ಹೈರಾಣಾದದ್ದು ಮಾತ್ರ ಸಾಮಾನ್ಯವಾಗಿತ್ತು. ಇನ್ನು ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಆಗಮಿಸಿ ಮಹಿಳೆಯರಿಗೆ ಮನವೊಲಿಸಲು ಪ್ರಯತ್ನಿಸಿದ್ರು. ಅಧಿಕಾರಿಗಳಿಗೂ ಸಹ ತರಾಟೆಗೆ ತೆಗೆದುಕೊಂಡು ನಾವು ಈ ಜಾಗ ಬಿಟ್ಟು ಕದಲೋದಿಲ್ಲ. ನಮಗೆ ನೀರು ಬೇಕು ನೀರು ಕೊಡಿ ಅಂತ ಪಟ್ಟು ಹಿಡಿದ್ರು. ಆದ್ರೆ ಕೊನೆಗೂ ಅಧಿಕಾರಿಗಳ ಭರವಸೆಗೆ ಮಹಿಳೆಯರು ತಮ್ಮ ಪ್ರತಿಭಟನೆಯನ್ನು ಕೈಬಿಟ್ರು.
ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ
Kshetra Samachara
28/06/2025 11:40 am