ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಜಾತ ನಾಗಲಿಂಗ ಸ್ವಾಮಿಯ 144 ನೇ ಜಾತ್ರಾ ಮಹೋತ್ಸವ

ನವಲಗುಂದ: ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಹಾಸ್ವಾಮಿಗಳ 144ನೇ ಜಾತ್ರಾ ಮಹೋತ್ಸವ ಇದೇ ಜೂನ್ 29 ರವಿವಾರ ಆರಾಧನಾ ಮಹೋತ್ಸವ ಮತ್ತು ಮಜಾರ ಪೂಜೆ ಹಾಗೂ ಜೂನ್ 30 ಸೋಮವಾರ ಪಲ್ಲಕ್ಕಿ ಹಾಗೂ ಮೇಣೆ ಮಹೋತ್ಸವ ಜರುಗುವುದು.

ಧಾರವಾಡ ಜಿಲ್ಲೆಯ ನವಲಗುಂದವು ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುಣ್ಯಕ್ಷೇತ್ರವಾಗಿದ್ದು, ಮಹಿಮಾಪುರುಷ ಅಜಾತ ನಾಗಲಿಂಗ ಮಹಾಸ್ವಾಮಿಗಳು ಹುಬ್ಬಳ್ಳಿಯ ಸಿದ್ದಾರೂಢರು, ಸಂತ ಶಿಶುನಾಳ ಶರೀಫರು, ಗರಗದ ಮಡಿವಾಳೇಶ್ವರರ ಸಮಕಾಲೀನವರಾಗಿದ್ದು, ಕ್ರಿ.ಶ 1881ರವರೆಗೆ ಇಲ್ಲಿ ನೆಲೆಸಿ ಇಲ್ಲಿನ ನೆಲ ಪಾವನಗೊಳಿಸಿದ್ದಾರೆ.

ಶ್ರೀ ಅಜಾತ ನಾಗಲಿಂಗ ಶ್ರೀಗಳ ಮಠದಲ್ಲಿ ಬೈಬಲ್ ಇದೆ ಚರ್ಚ್ ಅಲ್ಲ, ಮುಸ್ಲಿಮರು ದರ್ಗಾದಲ್ಲಿ ಇಡುವಂತಹ ಮೂಹರಂ ಪಂಜಾಗಳಿವೆ ಆದರೂ ಇದು ದರ್ಗಾ ಅಲ್ಲ, ಇನ್ನೂ ಹೆಣ ಹೊರುವಂತಹ ಸಿದಗಿ ಇದೆ ರುದ್ರ ಭೂಮಿಯಲ್ಲ, ಅದುವೇ ಈ ಜಗದೊಳಗೆ ಎಲ್ಲರೂ ಒಂದೇ ಎನ್ನುವಂತಹ ಭಾವನೆಯನ್ನು ಮೂಡಿಸಿದಂತಹ ಸರ್ವಧರ್ಮ ಸಾಂಕೇತಿಕವಾಗಿರುವಂತಹ ನಾಗಲಿಂಗ ಶ್ರೀಗಳ ಮಠ. ಇಲ್ಲಿಗೆ ದಿನಪ್ರಂತಿ ನೂರಾರು ಭಕ್ತರು ಬಂದು ಹೋಗುತ್ತಾರೆ ಹಲವಾರು ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿರುವಂತಹ ಸಾಕಷ್ಟು ಉದಾಹರಣೆಗಳು ನೋಡಲಿಕ್ಕೆ ಸಿಗುತ್ತವೆ.

- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

Edited By : Suman K
Kshetra Samachara

Kshetra Samachara

28/06/2025 09:35 am

Cinque Terre

14.06 K

Cinque Terre

0

ಸಂಬಂಧಿತ ಸುದ್ದಿ