", "articleSection": "Crime,News", "image": { "@type": "ImageObject", "url": "https://prod.cdn.publicnext.com/s3fs-public/421698-1751280074-Youtube-HD.00_29_07_12.Still2532~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಡುಗಿ ವಿಚಾರಕ್ಕೆ ಯುವಕನೋರ್ವನನ್ನ ಕಿಡ್ನಾಪ್ ಮಾಡಿ ಶೆಡ್‌ವೊಂದರಲ್ಲಿ ರಾಡ್‌ನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬ...Read more" } ", "keywords": "Hubli love patch-up, broken love reunion Hubli, rowdy-sheeter lover incident, ended up in hospital Hubli, love story Hubli, Hubli crime news, rowdy-sheeter violence Hubli, love triangle Hubli, hospital bed Hubli, Hubli relationship drama, Hubli violent incident, three years later patch-up, rowdy lover consequences, Hubli police case, love and crime Hubli", "url": "https://dashboard.publicnext.com/node" } ಹುಬ್ಬಳ್ಳಿ: ಬ್ರೇಕಪ್ ಆಗಿದ್ದ ಲವ್ 3 ವರ್ಷಗಳ ಬಳಿಕ ಪ್ಯಾಚಪ್! - ರೌಡಿಶೀಟರ್ ಲವ್ವರ್ ಹಿಂದೆ ಬಿದ್ದವ ಸೇರಿದ್ದು ಆಸ್ಪತ್ರೆ ಬೆಡ್!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬ್ರೇಕಪ್ ಆಗಿದ್ದ ಲವ್ 3 ವರ್ಷಗಳ ಬಳಿಕ ಪ್ಯಾಚಪ್! - ರೌಡಿಶೀಟರ್ ಲವ್ವರ್ ಹಿಂದೆ ಬಿದ್ದವ ಸೇರಿದ್ದು ಆಸ್ಪತ್ರೆ ಬೆಡ್!

ಹುಬ್ಬಳ್ಳಿ: ಹುಡುಗಿ ವಿಚಾರಕ್ಕೆ ಯುವಕನೋರ್ವನನ್ನ ಕಿಡ್ನಾಪ್ ಮಾಡಿ ಶೆಡ್‌ವೊಂದರಲ್ಲಿ ರಾಡ್‌ನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರಿಪೇಟ್ ಪೊಲೀಸರು ಓರ್ವ ರೌಡಿ ಶೀಟರ್ ಸೇರಿದಂತೆ 6 ಜನರನ್ನು ಜೈಲಿಗೆ ಅಟ್ಟಿದ್ದಾರೆ.

ಹುಬ್ಬಳ್ಳಿಯ ರಾಜಗೋಪಾಲ ನಗರದ ವಿನಾಯಕ ಭಂಡಾರಿ ಕಳೆದ ಮೂರು ವರ್ಷಗಳ ಹಿಂದೆ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಬಿನ್ನಾಭಿಪ್ರಾಯದಿಂದ ಇಬ್ಬರ ನಡುವೆ ಲವ್ ಬ್ರೇಕಪ್ ಆಗಿತ್ತು. ನಂತರ ವಿನಾಯಕ ತನ್ನ ಹಳೆಯ ಗೆಳತಿಯ ಅಕ್ಕನನ್ನು ಮದುವೆಯಾಗಿ ಸಂಸಾರ ನಡೆಸ್ತಿದ್ದ,

ಅತ್ತ ಆ ಯುವತಿ ರೌಡಿಶೀಟರ್ ಪೃಥ್ವಿ ಎಂಬಾತನೊಂದಿಗೆ ಪ್ರೇಮ ಸಂಬಂಧದಲ್ಲಿದ್ದಳು. ಆದರೆ, ಹಳೆಯ ಪ್ರೇಮಿಗಳು ಮತ್ತೆ ಕನೆಕ್ಟ್ ಆಗಿದ್ದಾರೆ ಎಂಬ ವಿಚಾರ ಗೊತ್ತಾದ ಪೃಥ್ವಿಗೆ ಇದು ಸಹಿಸೋಕೆ ಆಗಿಲ್ಲ. ಹೀಗಾಗಿ ವಿನಾಯಕನಿಗೆ ಕೆಲವು ಬಾರಿ ವಾರ್ನಿಂಗ್ ಕೊಟ್ಟಿದ್ದ.

ಆದ್ರೆ ಈ ವಾರ್ನಿಂಗ್‌ಗೆ ವಿನಾಯಕ ಕ್ಯಾರೇ ಎಂದಿರಲಿಲ್ಲ, ಹೀಗಾಗಿ ಶನಿವಾರ ಕಮರಿಪೇಟ್ ಬಳಿ ಪಾನ್ ತಿನ್ನಲು ಬಂದಿದ್ದ ವಿನಾಯಕನನ್ನು ಪೃಥ್ವಿ ಆಂಡ್ ಗ್ಯಾಂಗ್ ಕಿಡ್ನಾಪ್ ಮಾಡಿ ಕರೆತಂದು ಹೂಗಾರ್ ಪ್ಲಾಟ್‌ನಲ್ಲಿರುವ ಶೆಡ್‌ವೊಂದರಲ್ಲಿ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ.

ಇದರ ಪರಿಣಾಮ ವಿನಾಯಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹೀಗಾಗಿ ವಿನಾಯಕ ನೀಡಿದ ದೂರಿನನ್ವಯ 6 ಜನರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಅದೇನೆ ಇರಲಿ ಲವ್ ಬ್ರೇಕ್ ಅಪ್ ನಂತರ ಬೇರೆ ಮದುವೆಯಾಗಿದ್ದರು ಕೂಡ ಮತ್ತೇ ಹಳೇ ಲವ್ವರ್ ಹಿಂದೆ ಬಿದ್ದ ತಪ್ಪಿಗೆ ವಿನಾಯಕ ಆಸ್ಪತ್ರೆಯ ಬೆಡ್ ಸೇರಿದ್ರೆ, ಇತ್ತ ವಿನಾಯಕನನ್ನು ಆಸ್ಪತ್ರೆಯ ಬೆಡ್ ಸೇರುವಂತೆ ಮಾಡಿದ ಪೃಥ್ವಿ ಆತನ ಟೀಂ ಜೊತೆ ಜೈಲು ಪಾಲಾಗಿದ್ದಾನೆ.

ಒಟ್ಟಿನಲ್ಲಿ "ಪ್ರೀತಿ ಮಾಯೇ ಹುಷಾರು, ಕಣ್ಣೀರ್ ಮಾರೋ ಬಜಾರ್" ಅನ್ನೋದು ಇಲ್ಲಿ ಮತ್ತೆ ಸಾಬೀತಾಗಿದೆ!

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್‌

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/06/2025 04:11 pm

Cinque Terre

39.76 K

Cinque Terre

3

ಸಂಬಂಧಿತ ಸುದ್ದಿ