ಹುಬ್ಬಳ್ಳಿ : ಹುಬ್ಬಳ್ಳಿ ಅಂದ್ರೆ ಸಾಕು ಶ್ರೀ ಸಿದ್ದಾರೂಢರು ಮೊದಲು ನೆನಪಾಗುತ್ತಾರೆ. ಸುಪ್ರಸಿದ್ದ ಮಠಕ್ಕೆ ರಾಜ್ಯವಲ್ಲದೇ ದೇಶದ ವಿವಿಧಡೆ ಅಪಾರ ಭಕ್ತರು ಇದ್ದಾರೆ. ಸಿದ್ದಾರೂಢರ ಹೆಸರು ಹೇಳಿದ್ರೆ ಸಾಕು, ಅನೇಕರು ಧಾನ ಧರ್ಮದ ಕೆಲಸ ಮಾಡುತ್ತಾರೆ. ಆದ್ರೆ ಇದೇ ಸಿದ್ದಾರೂಢರ ಹೆಸರು ಹೇಳಿ, ಕೆಲ ಧರ್ಮದರ್ಶಿಗಳು ಅವ್ಯವಹಾರ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಭಕ್ತರಿಂದ ಪಡೆದ ಹಣವನ್ನು ಮಠಕ್ಕೆ ನೀಡದೆ ವಂಚಿಸುತ್ತಿದ್ದಾರೆ ಅಂತ ಕೆಲ ಭಕ್ತರು ಆರೋಪಿಸಿದ್ದಾರೆ.
ಹೌದು,,,,, ಸಿದ್ದಾರೂಢರ ಮಠಕ್ಕೆ ಅನೇಕರನ್ನು ಧರ್ಮದರ್ಶಿಗಳು ಅಂತ ನೇಮಕ ಮಾಡಲಾಗಿದೆ. ಹೀಗೆ ನೇಮಕವಾಗಿರೋ ಕೆಲ ಧರ್ಮದರ್ಶಿಗಳು, ಭಕ್ತರಿಂದ ಪಡೆದ ಹಣಕ್ಕೆ ರಸೀದಿಯನ್ನು ಕೊಡದೆ, ಮಠಕ್ಕೂ ನೀಡದೆ ತಾವು ತಮ್ಮ ಜೇಬಿಗಿಳಿಸುತ್ತಿದ್ದಾರೆ ಅಂತ ಕೆಲ ಭಕ್ತರು ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಸಿದ್ದನಗೌಡ ಪಾಟೀಲ್ ಅನ್ನೋರು ಕೂಡಾ ಸಿದ್ದಾರೂಢರ ಮಠದ ಧರ್ಮದರ್ಶಿಯಾಗಿದ್ದು, ಅವರ ವಿರುದ್ದ ಅದೇ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅನೇಕ ಭಕ್ತರು, ಹಣಕಾಸಿನ ಅವ್ಯವಹಾರದ ಆರೋಪ ಮಾಡಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಆರೂಢ ಜ್ಯೋತಿ ಆಗಮಿಸಿತ್ತು. ಈ ಸಮಯದಲ್ಲಿ ಅನೇಕ ಭಕ್ತರಿಂದ, ಧರ್ಮದರ್ಶಿಯಾಗಿರೋ ಸಿದ್ದನಗೌಡ ಪಾಟೀಲ್ ಅವರು ಹಣ ಪಡೆದಿದ್ದಾರೆ. ಆದ್ರೆ ಪಡೆದ ಹಣಕ್ಕೆ ರಸೀದಿ ನೀಡುವಂತೆ ಕೇಳಿದ್ರೆ ರಸೀದಿ ನೀಡ್ತಿಲ್ಲಾ. ಬದಲಾಗಿ ನಮ್ಮ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ. ಭಕ್ತರು ನೀಡಿದ ಹಣವನ್ನು ಮಠಕ್ಕೆ ನೀಡದೆ ಅವ್ಯವಾಹರ ಮಾಡಿದ್ದಾರೆ ಅಂತ ಕೆಲ ಭಕ್ತರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕೆಲ ಭಕ್ತರು, ಧರ್ಮದರ್ಶಿಯಾಗಿರೋ ಸಿದ್ದನಗೌಡ ಪಾಟೀಲ್ ರನ್ನು ಆ ಹುದ್ದೆಯಿಂದ ಕೆಳಗಿಳಿಸಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನು ಅಲ್ಲಿನ ಭಕ್ತರು ಮಾಡ್ತಿರೋ ಆರೋಪಗಳನ್ನು ಧರ್ಮದರ್ಶಿ ಸಿದ್ದನಗೌಡ ಪಾಟೀಲ್ ಅಲ್ಲಗಳೆದಿದ್ದಾರೆ. ಜ್ಯೋತಿ ಯಾತ್ರೆ ವೇಳೆ, ಭಕ್ತರಿಂದ ಹಣವನ್ನು ಪಡೆದಿಲ್ಲಾ, ಭಕ್ತರು ನೀಡಿದ ದೇಣಿಗೆಗೆ, ಜ್ಯೋತಿ ರಥಯಾತ್ರೆವೇಳೆ ಬಂದಿದ್ದ ಸೇವಕರು ರಸೀದಿ ನೀಡಿದ್ದಾರೆ. ಕಾಣಿಗೆ ಪೆಟ್ಟಿಗೆಯಲ್ಲಿ ಹಾಕಿದ ಹಣವನ್ನು ಮಠಕ್ಕೆ ಮುಟ್ಟಿಸಲಾಗಿದೆ. ನೇರವಾಗಿ ನನ್ನ ಬಳಿ ಯಾವುದೇ ವ್ಯಕ್ತಿ ಹಣ ನೀಡಿಲ್ಲ. ನಾನು ಕೂಡಾ ಪಡೆದಿಲ್ಲಾ. ಆದ್ರೆ ಕೆಲವರು ತಾವು ಧರ್ಮದರ್ಶಿಯಾಗಬೇಕು ಅಂತ ಅರ್ಜಿ ಹಾಕಿದ್ದರು. ಅವರ ಅರ್ಜಿ ಪರಿಗಣನೆಗೆ ಬಂದಿಲ್ಲ. ಇದೇ ದ್ವೇಷದಿಂದ ನನ್ನ ಹೆಸರಿಗೆ ಕಳಂಕ ತರಲು ವಿನಾಕಾರಣ ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ ಅಂತಿದ್ದಾರೆ ಧರ್ಮದರ್ಶಿ ಸಿದ್ದನಗೌಡ ಪಾಟೀಲ್.
ಒಟ್ಟಿನಲ್ಲಿ ಸಿದ್ದಾರೂಢರ ಮಠಕ್ಕೆ ಭವ್ಯ ಪರಂಪರೆಯಿದೆ. ಅಪಾರ ಭಕ್ತರು ಇದ್ದಾರೆ. ಈ ನಿಟ್ಟಿನಲ್ಲಿ ಮಠದ ಆಡಳಿತ ಮಂಡಳಿ, ಪರಿಶೀಲನೆ ನಡೆಸಬೇಕಿದೆ. ಹಣಕಾಸಿನ ಅವ್ಯವಹಾರ ಆಗಿದೆಯಾ..? ಅಥಾವ ಬೇರೆ ಕಾರಣಕ್ಕೆ ಕೆಲವರು ಆರೋಪ ಮಾಡ್ತಿದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಸಿ ವಾಸ್ತವವನ್ನು ಭಕ್ತರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/06/2025 11:17 am