ಶಿರಸಿ: ಶಿರಸಿ ತಾಲೂಕಿನ ಮತ್ತಿಘಟ್ಟ ಗ್ರಾಮದ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ಯುವಕನೊಬ್ಬ ನಾಪತ್ತೆಯಾಗಿ ಆರು ದಿನ ಕಳೆದರೂ ಇವತ್ತಿಗೂ ಯುವಕನ ಮೃತದೇಹ ಪತ್ತೆ ಆಗದೇ ಇರುವ ಹಿನ್ನಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಶನಿವಾರ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಮುಳುಗು ತಜ್ಞರನ್ನು ಭೇಟಿ ಮಾಡಿದರು.
ನಂತರ ಮುಳುಗು ತಜ್ಞರ ಜತೆಗೆ ಸಮಾಲೋಚನೆ ಮಾಡಿ ಮೃತ ಯುವಕನ ದೇಹ ಪತ್ತೆ ಹಚ್ಚಲು ಬೇಕಾದ ನೆರವು ನಾನು ಮಾಡುತ್ತೇನೆ ಎಂದು ಮುಳುಗು ತಜ್ಞರಿಗೆ ಶಾಸಕರು ಭರವಸೆ ನೀಡಿದರು. ಈ ಮೊದಲು ಜಲಪಾತದಲ್ಲಿ ಹೆಚ್ಚು ನೀರು ಹರಿಯುತ್ತಿರುವ ಕಾರಣದಿಂದ ಶೋಧ ಕಾರ್ಯದಲ್ಲಿ ಅಡಚಣೆ ಉಂಟಾಗಿದ್ದು, ಅದರ ಪರಿಣಾಮವಾಗಿ ವಿಶೇಷ ತರಬೇತಿ ಪಡೆದ ಎನ್ ಡಿಆರ್ ಎಫ್ ತಂಡವನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು.
ಎನ್ ಡಿಆರ್ ಎಫ್ 28 ಸದಸ್ಯರ ತಂಡ ಯುವಕ ಪವನ್ ನ ಪತ್ತೆಗಾಗಿ ಶೋಧ ಕಾರ್ಯ ನಡೆಸಿತ್ತು. ಅವರಿಗೆ ಸ್ಥಳೀಯರು ಕೂಡ ಸಹಕರಿಸಿದ್ದರು. ಸತತ ಪರಿಶ್ರಮದಿಂದ ಶೋಧ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆ ಆಗಿಲ್ಲ. ಆದುದರಿಂದ ಇನ್ನೂ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚುವ ನಿರೀಕ್ಷೆಯಲ್ಲಿದ್ದಾರೆ.
PublicNext
28/06/2025 08:20 pm