", "articleSection": "Politics,Human Stories,Government,International", "image": { "@type": "ImageObject", "url": "https://prod.cdn.publicnext.com/s3fs-public/463655-1751126527-WhatsApp-Image-2025-06-28-at-9.22.09-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಯಾತ್ರೆ ಕೈಗೊಂಡಿರುವ ಭಾರತದ ಬಾಹ್ಯ...Read more" } ", "keywords": "India from space, PM Modi, Shubhanshu, Space technology, ISRO, Indian Space Research Organisation, Bharat from space, Indian satellite imagery, PM Modi interview, Shubhanshu conversation, Space exploration India ", "url": "https://dashboard.publicnext.com/node" }
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಯಾತ್ರೆ ಕೈಗೊಂಡಿರುವ ಭಾರತದ ಬಾಹ್ಯಾಕಾಶ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೊತೆ ವೀಡಿಯೋ ಕರೆ ಮೂಲಕ ಹೃದಯಸ್ಪರ್ಶಿ ಸಂಭಾಷಣೆ ನಡೆಸಿದ್ದಾರೆ.
ಈ ಸಂಭಾಷಣೆಯಲ್ಲಿ ಬಾಹ್ಯಾಕಾಶದ ಅನುಭವಗಳು, ವಿಜ್ಞಾನ ಸಾಧನೆಗಳು ಹಾಗೂ ದೇಶದ ಬೆಳವಣಿಗೆಯೊಂದಿಗೆ 'ಗಜರ್ ಕಾ ಹಲ್ವಾ' ಕೂಡ ಚರ್ಚೆಯ ವಿಷಯವಾಯಿತು. ಇತಿಹಾಸ ನಿರ್ಮಿಸಿರುವ ಶುಕ್ಲಾ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ನಗುತ್ತಾ ಹೇಳಿದರು, "ನೀವು ಬಾಹ್ಯಾಕಾಶದಲ್ಲಿದ್ದೀರಾ, ಅಲ್ಲಿ ಗುರುತ್ವಾಕರ್ಷಣೆ ಇಲ್ಲ. ಆದರೆ ಭೂಮಿಯ ಮೇಲೆ ಪ್ರತಿಯೊಬ್ಬ ಭಾರತೀಯರು ನಿಮ್ಮನ್ನು ಗಮನಿಸುತ್ತಿದ್ದಾರೆ." ಈ ನಡುವೆ ಪ್ರಧಾನಿ ಅವರು ಹಾಸ್ಯಮಿಶ್ರಿತವಾಗಿ "ನೀವು ಗಜರ್ ಕಾ ಹಲ್ವಾ ಅಲ್ಲಿಗೆ ಕೊಂಡೊಯ್ದಿದ್ದೀರಾ? ಅದನ್ನು ನಿಮ್ಮ ತಂಡದವರೊಂದಿಗೆ ಹಂಚಿಕೊಂಡಿರಾ?" ಎಂದು ಕೇಳಿದ್ದಾರೆ.
ಶುಕ್ಲಾ ಉತ್ತರಿಸುತ್ತಾ ನಗುತ್ತಾ ಹೇಳಿದರು, "ಹೌದು ಸರ್! ನಾನು ಗಜರ್ ಕಾ ಹಲ್ವಾ, ಮೂಂಗ್ ದಾಲ್ ಹಲ್ವಾ ಮತ್ತು ಆಮ್ ರಸ ಕೂಡ ತೆಗೆದುಕೊಂಡಿದ್ದೆ. ನಾನು ಬಯಸಿದ್ದು, ಇತರ ದೇಶಗಳಿಂದ ಬಂದ ನನ್ನ ಸಹಯಾತ್ರಿಕರೂ ಭಾರತದ ಶ್ರೀಮಂತ ಅಡುಗೆ ಪರಂಪರೆಯನ್ನು ಅನುಭವಿಸಬೇಕು ಎಂಬುದು. ನಾವು ಎಲ್ಲರೂ ಒಟ್ಟಿಗೆ ಸವಿದೆವು ಮತ್ತು ಎಲ್ಲರೂ ಅದನ್ನು ಬಹಳ ಇಷ್ಟಪಟ್ಟರು." ಎಂದು ಹೇಳಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಹೇಳಿದರು, "ಸ್ವಲ್ಪ ಸಮಯದ ಹಿಂದೆ ನಾನು ಕಿಟಕಿಯಿಂದ ನೋಡುತ್ತಿದ್ದಾಗ, ನಾವು ಹವಾಯಿಯ ಮೇಲೆ ಹಾರುತ್ತಿದ್ದೆವು. ನಾವು ದಿನಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುತ್ತೇವೆ!" ಎಂದು ಹೇಳಿ ಭಾವನಾತ್ಮಕವಾಗಿ ದೇಶಭಕ್ತಿಯ ಸಂದೇಶವನ್ನ ನೀಡಿದ್ದಾರೆ. "ಭೂಪಟದಲ್ಲಿ ಭಾರತ ಎಷ್ಟು ಸುಂದರವಾಗಿದೆಯೋ, ಬಾಹ್ಯಾಕಾಶದಿಂದ ನೋಡಿದರೆ ಅದು ಇನ್ನೂ ಭವ್ಯವಾಗಿದೆ. ನಮ್ಮ ರಾಷ್ಟ್ರ ದಿಟ್ಟವಾಗಿ, ವೇಗವಾಗಿ ಮುಂದೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
PublicNext
28/06/2025 09:32 pm