", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/286525-1751191313-WhatsApp-Image-2025-06-29-at-3.31.40-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 2 ದಿನಗಳಿಂದ ನೀರು ಪೂರೈಕೆಯಾಗದೆ ಬೀಗ ಹಾಕಿದ್ದು,...Read more" } ", "keywords": "Bailhongal bus station, lack of water, toilet facilities shut, public inconvenience, infrastructure issues, KSRTC buses, NWKRTC buses.", "url": "https://dashboard.publicnext.com/node" }
ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 2 ದಿನಗಳಿಂದ ನೀರು ಪೂರೈಕೆಯಾಗದೆ ಬೀಗ ಹಾಕಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣಕ್ಕೆ ದಿನಾಲೂ ನೂರಾರು ಬಸ್ಗಳು ಸಂಚರಿಸುತ್ತಿದ್ದೂ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಇವರೆಲ್ಲ ಬಸ್ ನಿಲ್ದಾಣದ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಇದನ್ನು ಬಿಟ್ಟರೆ ಬೇರೆ ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ. ಕೆಲವು ಪ್ರಯಾಣಿಕರು ಬೀಗ ಜಡಿದ ಗೇಟಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿನ ಉಡುಪಿ ಹೋಟೆಲ ಲಕ್ಷಾಂತರ ರೂ. ಗಳನ್ನು ಬಾಡಿಗೆ ಪಾವತಿ ಮಾಡಿ ಹೋಟೆಲ್ ನಡೆಸುತ್ತಿದ್ದಾರೆ. ಬಸ್ ನಿಲ್ದಾಣ ದಲ್ಲಿ ಶೌಚಾಲಯ ಹಾಗೂ ಹೋಟೆಲ್ ಎರಡು ಸೇರಿ ಒಂದು ಬೋರವೆಲ್ ಇದೆ. ಮತ್ತೊಂದು ಡಿಪೋ ಒಳಗೆ ಇದೆ. ಸದ್ಯ ಎರಡು ಬೋರ ವೆಲ್ಗಳ ಮೋಟರ್ ದುರಸ್ತಿ ಇರುವುದರಿಂದ ನೀರು ಪೂರೈಕೆ ಯಾಗುತ್ತಿಲ್ಲ. ಈ ಕುರಿತು ಘಟಕ ವ್ಯವಸ್ಥಾಪಕರಿಗೆ, ಮೇಲಾಧಿ ಕಾರಿಗಳಿಗೆ ತಿಳಿಸಿದರೂ ಯಾರು ಕ್ಯಾರೇ ಎನ್ನುತ್ತಿಲ್ಲ.
ಈ ಕುರಿತು ಹೋಟೆಲ್ ಮಾಲೀಕರಾದ ಮಂಜುನಾಥ ಹೆಬಸೂರ ಮಾತನಾಡಿ, ಸಾರಿಗೆ ಸಂಸ್ಥೆ ನೀರಿನ ನಿರ್ವಹಣೆ ಅಂತಾ ಪ್ರತಿ ತಿಂಗಳು 4 ಸಾವಿರ ರೂ ಗಳನ್ನು ಬಾಡಿಗೆ ಜೊತೆ ತುಂಬಿಸಿಕೊಳ್ಳುತ್ತಾರೆ. ಆದರೆ ಬೋರವೆಲ್ ಮೋಟಾರ್ ನಿರ್ವಹಣೆ ಮಾಡುತ್ತಿಲ್ಲ. ನಾವೇ ಕೈಲಿಂದ ಖರ್ಚು ಮಾಡಿ ಅನೇಕ ಬಾರಿ ಮೋಟಾರ್ ರಿಪೇರಿ ಮಾಡಿದ್ದೇವೆ. ಬಾಡಿಗೆನೂ ಕಟ್ಟಬೇಕು ಹಾಗೂ ಮೋಟಾರ್ ದುರಸ್ತಿ ನಾವೇ ಮಾಡಬೇಕು ಅಂದರೆ ಹೇಗೆ ಎಂದರು.
ಇನ್ನಾದರೂ ಸಾರಿಗೆ ಸಂಸ್ಥೆ ಯ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿನ ಹೋಟೆಲ್ ಹಾಗೂ ಶೌಚಾಲಯ ಕ್ಕೆ ಬೋರವೆಲ್ ಮೋಟಾರ್ ದುರಸ್ತಿಗೊಳಿಸಿ ನೀರಿನ ಸಮಸ್ಯೆಗೆ ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.
-ಶರೀಫ ನದಾಫ ಪಬ್ಲಿಕ್ ನೆಕ್ಸ್ಟ್ ಬೈಲಹೊಂಗಲ
PublicNext
29/06/2025 03:32 pm