ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಯಾಂಕ್ ಮ್ಯಾನೇಜರ್ ಪತ್ನಿ ನೇಣಿಗೆ ಶರಣು

ಬೆಂಗಳೂರು: ಬ್ಯಾಂಕ್ ಮ್ಯಾನೇಜರ್ ಪತ್ನಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಶಾಲಕ್ಷ್ಮಿ ಹಿರೇಮಠ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಮೃತ ವಿಶಾಲಕ್ಷ್ಮಿ ಹಿರೇಮಠಗೆ ಮದುವೆಯಾಗಿ 14 ವರ್ಷವಾಗಿತ್ತು. ಮೃತಳಿಗೆ 9 ವರ್ಷ ಹಾಗೂ 7 ವರ್ಷದ ಪುತ್ರಿ ಮತ್ತು 5 ವರ್ಷದ ಮಗನಿದ್ದ. ಮೃತಳ ಪತಿ ಶಂಭುಲಿಂಗಯ್ಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸ್ತಿದ್ದಾರೆ. ಹಾವೇರಿಯ ಹಾನಗಲ್‌ನ ಕುಂದೂರು ಮೂಲದ ಮಹಿಳೆ ಕಳೆದ 14 ವರ್ಷದಿಂದ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸ ಮಾಡ್ತಿದ್ರು. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರೊ ಕೋಣನಕುಂಟೆ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.

Edited By : Nagaraj Tulugeri
PublicNext

PublicNext

30/06/2025 10:11 pm

Cinque Terre

4.89 K

Cinque Terre

0

ಸಂಬಂಧಿತ ಸುದ್ದಿ