", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1751283058-WhatsApp-Image-2025-06-30-at-5.00.48-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಆಕೆ ಬೆಂಗಳೂರಿನವಳು. ಮದುವೆಯಾದ ಸ್ವಲ್ಪ ವರ್ಷದಲ್ಲೇ ಗಂಡ ಮೃತಪಟ್ಟಿದ್ದ. ಆತ ಅಸ್ಸಾಂನವನು. ಹೆಂಡತಿ ಮಕ್ಕಳನ್ನ ಅಲ್ಲೇ ಬಿಟ್ಟು ಬಂದಿದ...Read more" } ", "keywords": "Bengaluru, love affair gone wrong, murder case, boyfriend arrested, trash disposal, police investigation, relationship issues.", "url": "https://dashboard.publicnext.com/node" } ಬೆಂಗಳೂರು: ಸೆಕೆಂಡ್ ಹ್ಯಾಂಡ್ ಪ್ರೇಮದಲ್ಲಿ ಬಿರುಕು, ಪ್ರೇಯಸಿ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದಿದ್ದ ಪ್ರೇಮಿ ಅರೆಸ್ಟ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೆಕೆಂಡ್ ಹ್ಯಾಂಡ್ ಪ್ರೇಮದಲ್ಲಿ ಬಿರುಕು, ಪ್ರೇಯಸಿ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದಿದ್ದ ಪ್ರೇಮಿ ಅರೆಸ್ಟ್

ಬೆಂಗಳೂರು: ಆಕೆ ಬೆಂಗಳೂರಿನವಳು. ಮದುವೆಯಾದ ಸ್ವಲ್ಪ ವರ್ಷದಲ್ಲೇ ಗಂಡ ಮೃತಪಟ್ಟಿದ್ದ. ಆತ ಅಸ್ಸಾಂನವನು. ಹೆಂಡತಿ ಮಕ್ಕಳನ್ನ ಅಲ್ಲೇ ಬಿಟ್ಟು ಬಂದಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.ಆದ್ರೆ ಅದೇ ಹೊಂದಾಣಿಕೆ‌ ಕೊನೆವರೆಗೆ ಉಳಿದಿರಲಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟು ಪ್ರೇಯಸಿಯನ್ನೇ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದಿದ್ದ. ಪ್ರಕರಣವನ್ನ 20 ಗಂಟೆಯಲ್ಲೇ ಬೇಧಿಸಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಜೂನ್ 29 ರಂದು ಮುಂಜಾನೆ 1.45 ರಿಂದ 2 ಗಂಟೆಯ ಸಮಯ.ಸಿ.ಕೆ ಅಚ್ಚುಕಟ್ಟುವಿನ ಸ್ಕೇಟಿಂಗ್ ಗ್ರೌಂಡ್ ಬಳಿ ಕಸ ಎಸೆಯಲು ಕಸದ ಲಾರಿ ಬಳಿಗೆ ಬಂದಿದ್ದ ವ್ಯಕ್ತಿಗೆ ಮಹಿಳೆಯ ಕೂದಲು ಕಾಣಿಸಿತ್ತು. ಹತ್ತಿರ ಹೋಗಿ ನೋಡಿದಾಗ ಮೂಟೆಯಲ್ಲಿ ಮಹಿಳೆಯ ಮೃತದೇಹವಿತ್ತು. ಬೆಚ್ಚಿಬಿದ್ದ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ರು. ತನಿಖೆ ವೇಳೆ ಬೆಚ್ಚಿಬೀಳೋ ಸಂಗತಿಗಳೇ ಬಯಲಾಗಿದೆ.

ಈ ಫೋಟೋದಲ್ಲಿ ಕಾಣ್ತಿರುವ ಮಹಿಳೆಯ ಹೆಸರು ಆಶಾ. ಬೆಂಗಳೂರು ಮೂಲದ 40 ವರ್ಷದ ವಯಸ್ಸಿನ ಆಶಾಗೆ ಮದುವೆಯಾಗಿ ಪತಿ ಮೃತಪಟ್ಟಿದ್ದ. ಇದ್ದ ಇಬ್ಬರು ಮಕ್ಕಳನ್ನ ಆಶ್ರಮಕ್ಕೆ ಸೇರಿಸಿ ಕಳೆದ ಒಂದೂವರೆ ವರ್ಷದಿಂದ ಈ ಷಂಶುದ್ದೀನ್ ಜೊತೆಗೆ ಹುಳಿಮಾವುವಿನಲ್ಲಿ ಮನೆ ಮಾಡಿಕೊಂಡು ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿದ್ದಳು.ಅಸ್ಸಾಂ ಮೂಲದ 33 ವರ್ಷದ ಈ ಆಸಾಮಿಗೂ ಮದುವೆ ಆಗಿದ್ದು ಇಬ್ಬರು ಮಕ್ಕಳಿದ್ದಾರೆ. ಹೆಂಡತಿ ಮಕ್ಕಳನ್ನ ಅಲ್ಲೇ ಬಿಟ್ಟು ಅರ್ಬನ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ದ ಆಶಾ ಜೊತೆಗೆ ಬೆಂಗಳೂರಲ್ಲಿ ಡುಯೆಟ್ ಹಾಡ್ತಿದ್ದ. ಆದ್ರೆ ಪ್ರೀತಿ ಹುಟ್ಟಿದ ಮೊದಲ ದಿನಕ್ಕೂ ಕೊನೆ ದಿನಕ್ಕೂ ಒಂದೇ ರೀತಿ ಇರೋದಿಲ್ಲ ನೋಡಿ. ಹಾಗೆ ಇಬ್ಬರ ಮಧ್ಯೆ ಆಗಾಗ ಜಗಳ ಆಗ್ತಿತ್ತು. ಕುಡಿದು ಬರ್ತಿದ್ದ ಆಶಾ ಕಿರಿಕ್ ಮಾಡ್ತಿದ್ದಳಂತೆ. ಅಲ್ಲದೇ ಫೋನ್ ನಲ್ಲಿ ಗಂಟೆಗಟ್ಟಲೇ ಬ್ಯುಸಿಯಾಗಿರ್ತಿದ್ದಳಂತೆ. ಹಾಗಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು.

ಇನ್ನೂ ಅದೇ ರೀತಿ 29 ರಂದು ಸಂಜೆ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇಬ್ಬರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಷಂಶುದ್ದೀನ್ ಆಶಾ ಕತ್ತು ಹಿಸುಕಿ ಕೊಲೆ ಮಾಡಿಬಿಟ್ಟಿದ್ದಾನೆ.ಮೂಟೆ ಕಟ್ಟಿ ಮೃತದೇಹ ಎಸೆಯಲು ಬೈಕ್ ನಲ್ಲಿ ಇಟ್ಟುಕೊಂಡೆ ನಿರ್ಜ‌ನ ಪ್ರದೇಶಕ್ಕೆ ಹುಡುಕಾಟ ನಡೆಸಿದ್ದಾನೆ. ಹೀಗೆ ಬಂದವನಿಗೆ ಸಿ.ಕೆ ಅಚ್ಚುಕಟ್ಟು ಸ್ಕೇಟಿಂಗ್ ಗ್ರೌಂಡ್ ಬಳಿ ಕಸದ ಲಾರಿ ಕಂಡಿದೆ. ಅದೇ ಲಾರಿಯಲ್ಲಿ ಮೃತದೇಹ ಎಸೆದು ಪರಾರಿ ಆಗಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು 20 ಗಂಟೆ ಒಳಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ಅದೇನೇ ಹೇಳಿ ಗಂಡ ಹೆಂಡತಿ ಆಗಿರಲಿ ಪ್ರೇಮಿಗಳೇ ಆಗಿರಲಿ. ಒಟ್ಟಿಗೆ ಇದ್ದ ಮೇಲೆ ಸಣ್ಣ ಪುಟ್ಟ ಗಲಾಟೆ ಸಾಮಾನ್ಯ. ಆದ್ರೆ ಅದೇ ಗಲಾಟೆ ಕೊಲೆ ಹಂತಕ್ಕೆ ಹೋಗಿದ್ದು ನಿಜಕ್ಕೂ ದುರಂತ.

Edited By : Shivu K
PublicNext

PublicNext

30/06/2025 05:01 pm

Cinque Terre

10.77 K

Cinque Terre

0

ಸಂಬಂಧಿತ ಸುದ್ದಿ