ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ವಿಚಾರ, ಯಾರಾದ್ರು ಕೂಗಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮ ಸರ್ಕಾರ ಕೈಗೊಂಡಿದೆ. ಗಣೇಶ ಬಂದ್ರೆ ಒಳ್ಳೆಯದು ಗಲಾಟೆಗೆ ರಾಜಕೀಯ ಬಣ್ಣ ಬಳಿಯೋದು ಸರಿಯಲ್ಲ.
ಬಿಜೆಪಿಯವರು ಬರೀ ಆರೋಪ ಮಾಡುತ್ತಾರೆಂದು ಹುಬ್ಬಳ್ಳಿಯಲ್ಲಿ ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ಮಾಧ್ಯಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಒಳ್ಳೆ ಕೆಲಸ ನೋಡಿ ಅವರಿಗೆ ನಿದ್ದೆ ಬರಲ್ಲ. ಹೀಗಾಗಿ ಆರೋಪ ಮಾಡ್ತಿದ್ದಾರೆ. ಎಲ್ಲಾ ಸರ್ಕಾರಗಳು ಕೂಡಾ ಕೆಲ ಪ್ರಕರಣಗಳನ್ನು ಹಿಂಪಡೆದಿವೆ. ಜಾತಿ, ಧರ್ಮ, ಪಕ್ಷ ನೋಡಿ ಕೇಸ್ ಹಿಂಪಡೆಯಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2025 04:06 pm