ಮಂಡ್ಯ,: ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ನಡೆದಿದ್ದ ಕಲ್ಲು ತೂರಾಟದ ಕಿಂಗ್ಪಿನ್ ಯಾರು ಎಂಬುದು ಬಯಲಾಗಿದೆ. ಚನ್ನಪಟ್ಟಣ ಮೂಲದ ಇರ್ಫಾನ್ ಎಂಬಾತನೇ ಈ ಘಟನೆಯ ಪ್ರಮುಖಕರನೆಂದು ಪೊಲೀಸರು ಗುರುತಿಸಿದ್ದಾರೆ.
ಹಲವಾರು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದ ಇರ್ಫಾನ್, ಮಸೀದಿ ಮುಂದೆ ಗಣೇಶ ಮೆರವಣಿಗೆ ನಡೆಯುತ್ತಿರುವುದಕ್ಕೆ ಅಸಮಾಧಾನಗೊಂಡಿದ್ದಾನೆ. ಆತನನ್ನು ಜಾಫರ್ ಎಂಬಾತ ಪ್ರಚೋದಿಸಿದ್ದಾನೆಂಬ ಆರೋಪವಿದೆ.
ಈವರೆಗೆ ಪ್ರಕರಣ ಸಂಬಂಧ 22 ಮಂದಿಯನ್ನು ಬಂಧಿಸಲಾಗಿದೆ. ಇತ್ತ, ಇಂದು ಮಂಡ್ಯದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
PublicNext
10/09/2025 09:27 am